POLICE BHAVAN KALABURAGI

POLICE BHAVAN KALABURAGI

02 September 2011

GULBARGA DIST REPORTED CRIMES

ಹಲ್ಲೆ ಪ್ರಕರಣ :
ಕಮಲಾಪೂರ ಪೊಲೀಸ ಠಾಣೆ :
ಪುಷ್ಪರಾಜ ತಂದೆ ಕರಬಸಪ್ಪಾ ಪಾಟೀಲ ಸಾಃ ಡೊಂಗರಗಾಂವ ರವರು ನಾನು ನಿನ್ನೆ ಮಧ್ಯಾಹ್ನ ನಾನು, ನನ್ನ ಮಗ ಕುಮಾರ ಮತ್ತು ಆಳು ಮಗ ರಾಜಪ್ಪ ತಂದೆ ಜಗನ್ನಾಥ ಕಲ್ಲೂರ ನಮ್ಮ ಮನೆಯ ಮುಂದೆ ಕುಳಿತ್ತಿದ್ದಾಗ ನಮ್ಮ ಮನೆಯ ಪಕ್ಕದವರಾದ ಕಾಶಪ್ಪಾ ತಂದೆ ರಾಚಪ್ಪ ಮತ್ತು ಆತನ ಮಕ್ಕಳು ಕೂಡಿಕೊಂಡು ನಮ್ಮ ಮನೆಯ ಮುಂದಿನ ಸಾರ್ವಜನಿಕ ರಸ್ತೆಯ ಮೇಲೆ ಹೆಸರು ಬೆಳೆ ತಂದು ಹಾಕಿದ್ದು ನಾನು ನನ್ನ ಮಗ ಕುಮಾರ ಇಬ್ಬರು ಕೂಡಿ ಅವರಿಗೆ ಹೆಸರು ಬೆಳೆ ಹಾಕಬೇಡ ಅಂತಾ ಹೇಳಿದಕ್ಕೆ ತಕರಾರು ಮಾಡಿರುತ್ತಾರೆ ನನ್ನ ತಮ್ಮ ಮಹೇಶ ಪಾಟೇಲ ಇತನೊಂದಿಗೆ ನಮ್ಮ ಮನೆಯ ಮುಂದಿನ ಕಟ್ಟೆಯ ಮೇಲೆ ಕುಳಿತುಕೊಂಡು ಮಾತನಾಡುತ್ತಿದ್ದಾಗ ರಾತ್ರಿ ಕಾಶಪ್ಪ ತಂದೆ ರಾಚಪ್ಪಾ ಪಾಟೀಲ ಮತ್ತು ಆತನ ಮಕ್ಕಳಾದ ರಾಚಪ್ಪ ತಂದೆ ಕಾಶಪ್ಪಾ, ವಿಜಯಕುಮಾರ ತಂದೆ ಕಾಶಪ್ಪಾ ಎಲ್ಲರೂ ಕೂಡಿಕೊಂಡು ಕೈಯಲ್ಲಿ ಬಡಿಗೆಗಳನ್ನು ಹಿಡಿದುಕೊಂಡು ಬಂದು ಅವಾಚ್ಯವಾಗಿ ಬೈದು ಹೊಡೆ ಬಡೆ ರಕ್ತಗಾಯ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ :
ಕಮಲಾಪೂರ ಪೊಲೀಸ ಠಾಣೆ :
ಶ್ರೀ ರಾಚಪ್ಪಾ ತಂದೆ ಕಾಶಪ್ಪಾ ಪೂಲೀಸ ಪಾಟೀಲ ಸಾ:ಡೊಂಗರಗಾಂವ ತಾಃಗುಲಬರ್ಗಾ ನಾನು ನನ್ನ ತಂದೆ ಕಾಶಪ್ಪಾ ತಮ್ಮ ವಿಜಯಕುಮಾರ ಎಲ್ಲರೂ ಮನೆಯಲ್ಲಿ ಊಟ ಮಾಡುತ್ತಾ ಕುಳಿತಾಗ ಪುಷ್ಪರಾಜ ತಂದೆ ಕರಬಸಪ್ಪಾ ರವೀಂದ್ರ ತಂದೆ ಕರಬಸಪ್ಪಾ ಮಹೇಶ ತಂದೆ ಕರಬಸಪ್ಪಾ ಕುಮಾರ ತಂದೆ ಪುಷ್ಪರಾಜ ರಾಜಪ್ಪಾ ತಂದೆ ಜಗನ್ನಾಥ ಕಲ್ಲೂರ ಅಂಬ್ರೇಶ ತಂದೆ ಭೀಮಶ್ಯಾ ಪಂಡಿತ ತಂದೆ ಶರಣಪ್ಪಾ ರೇವಪ್ಪಾ ತಂದೆ ಗೌಡಪ್ಪಾ ರಾಂಪೂರೆ ರೇವಣಸಿದ್ದಪ್ಪಾ ತಂದೆ ಸಿದ್ರಾಮಪ್ಪಾ ರಾಂಪೂರೆ 1ಹೊನ್ನಪ್ಪಾ ತಂದೆ ಶರಣಪ್ಪಾ ಎಲ್ಲರೂ ಗುಂಪು ಕಟ್ಟಿಕೊಂಡು ಬಂದು ನಮ್ಮ ಮನೆಯ ಎದುರುಗಡೆ ಇರುವ ಸಾರ್ವಜನಿಕ ರಸ್ತೆಯ ಮೇಲೆ ನಿಂತು ಅವಾಚ್ಯವಾಗಿ ಬೈದು ಬಡಿಗೆಯಿಂದ, ಕಬ್ಬಿಣದ ಸಲಾಯಿಕೆಯಿಂದ ಮತ್ತು ಕಲ್ಲಿನಿಂದ ಹೊಡೆಬಡೆ ಮಾಡಿ ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 


 


 


 

GULBARGA DIST REPORTED CRIME

ನಗರದಲ್ಲಿ ಹಲವಾರು ದರೊಡೆ, ಕೊಲೆ ಪ್ರಯತ್ನ, ಹಲ್ಲೆ ಪ್ರಕರಣಗಳಲ್ಲಿ ಬೇಕಾಗಿದ್ದ ಕುಖ್ಯಾತ ರೌಡಿ ಛೋಟ್ಯಾ ಬಂದನ :

ಗ್ರಾಮೀಣ ಠಾಣೆ : ಶ್ರೀ. ಚಂದ್ರಶೇಖರ ಬಿ.ಪಿ. ಸರ್ಕಲ್ ಇನ್ಸಪೆಕ್ಟರ ಎಂ.ಬಿ. ನಗರ ವೃತ್ತ ಗುಲಬರ್ಗಾ ರವರು ಸರಕಾರಿ ತರ್ಫೇಯಿಂದ ಫಿರ್ಯಾದಿಯಾಗಿ ಅರ್ಜಿ ಸಲ್ಲಿಸಿದ್ದೆನೆಂದರೆ, ಅಶೋಕ ನಗರ ಠಾಣಾ ವ್ಯಾಪ್ತಿಯಲ್ಲಿ ಕೊಠಾರಿ ಭವನ ಮುಂದೆ ಜೇವರ್ಗಿ ಸರ್ಕಲ ಪೆಟ್ರೊಲ್ ಪಂಪ ಹತ್ತಿರ ಛೋಟ್ಯಾ ಊರ್ಫ ಪ್ರಿಯದರ್ಶನ ಸಾ: ಪಂಚಶೀಲ ನಗರ ಗುಲಬರ್ಗಾ ಮತ್ತು ಆತನ ಸಹಚರರು ಹಣ ಹಾಗೂ ಬಂಗಾರದ ಒಡವೆ ದೋಚಿಕೊಂಡು ಮತ್ತು ಒಂದು ಮೋಟಾರ ಸೈಕಲದೊಂದಿಗೆ ಪರಾರಿಯಾಗಿರುತ್ತಾರೆ ಅಂತಾ ಕಂಟ್ರೋಲ ರೂಮದಿಂದ ಮಾಹಿತಿ ಬಂದಿರುತ್ತದೆ. ಹಾಗು ಮಾನ್ಯ ಎಸ್.ಪಿ.ಸಾಹೇಬರು ದೂರವಾಣಿ ಆದೇಶದ ಮೇರೆಗೆ ನಾನು ಮತ್ತು ಪಿ.ಎಸ್.ಐ. ವಿಶ್ವವಿದ್ಯಾಲಯ ಠಾಣೆಯ ಸಿಬ್ಬಂದಿಯವರನ್ನು ಕರೆದುಕೊಂಡು ಹೋಗಿ ಆರೋಪಿತರನ್ನು ಪತ್ತೆ ಮಾಡಿರಿ ಅಂತಾ ಆದೇಶಸಿದ ಪ್ರಕಾರ ನಾನು ಹಾಗೂ ಪಿ.ಎಸ್.ಐ. ಪಂಡಿತ ಸಗರ ವಿಶ್ವ ವಿದ್ಯಾಲಯ ಠಾಣೆಯ ಸಿಬ್ಬಂದಿಯವರಾದ ಮನೋಹರ ಗ್ರಾಮೀಣ ಠಾಣೆ, ಮೋಹನ, ರುದ್ರಗೌಡ, ಹಾಗೂ ಅಶೋಕ ನಗರ ಠಾಣೆಯ ಬಸವರಾಜ, ರಫೀಕ ಹಾಗೂ ಎಂ.ಬಿ. ನಗರ ಠಾಣೆಯ ಪ್ರಭಾಕರ ಪಿಸಿ ರವರೊಂದಿಗೆ ಆರೋಪಿತರ ಪತ್ತೆಗಾಗಿ ಪೆಟ್ರೊಲಿಂಗ ಮಾಡುತ್ತಾ ಶರಣ ಶಿರಸಗಿ ಹತ್ತಿರ ಹೋಗಿರಬಹುದೆಂದು ಸಂಶಯ ಮೇರೆಗೆ ಹೋದಾಗ ಶರಣ ಶಿರಸಗಿ ಗ್ರಾಮದ ಹತ್ತಿರ ಸುಣ್ಣದ ಬಟ್ಟಿ ಹತ್ತಿರ ಇರುವ ಗುಂಪಾದಲ್ಲಿ ಶರಣಪ್ಪ ಸಗರ ಇತನು ಆರೋಪಿ ಛೊಟ್ಯಾ ಊರ್ಫ ಆನಂದ ಊರ್ಪ ಪ್ರಿಯದರ್ಶನ ಇತನ ಸಹಚರರನ್ನು ಆಶ್ರಯ ಕೊಟ್ಟಿದ್ದರ ಬಗ್ಗೆ ತಿಳಿದು ಬಂದಿದ್ದು ಅಲ್ಲದೆ ಆರೋಪಿತನು ಸುಲಿಗೆ ಮಾಡಿಕೊಂಡು ಬಂದ ಹೊಂಡಾ ಎಕ್ಟೀವ್ ಕೆಎ 32 ಎಕ್ಷ 8038 ನೇದ್ದು ಗುಂಪಾದ ಹೊರೆಗೆ ನಿಲ್ಲಿಸಿದ್ದನ್ನು ನೋಡಿ ಆರೋಪಿತರು ಒಳಗೆ ಗುಂಪಾದಲ್ಲಿ ಇರುವ ಬಗ್ಗೆ ಸಂಶಯಗೊಂಡು ಅವರನ್ನು ದಸ್ತಗಿರಿ ಮಾಡಲು ಹೋಗುವ ಕಾಲಕ್ಕೆ ಗುಂಪಾದಿಂದ ಛೋಟ್ಯಾ ಹಾಗೂ ಇತರೆ ಸಹಚರರು ಒಮ್ಮೇಲೆ ಹೊರೆಗೆ ಬಂದು ದಸ್ತಗಿರಿ ಮಾಡಲು ನಿಂತಿದ್ದ ನನ್ನ ಹಾಗೂ ಪಿ.ಎಸ್.ಐ. ಪಂಡಿತ ವಿಶ್ವ ವಿದ್ಯಾಲಯ ಠಾಣೆ ಮತ್ತು ಸಿಬ್ಬಂದಿಯವರ ಮೇಲೆ ಛೋಟ್ಯಾ ಹಾಗೂ ಆತನ ಸಂಗಡವಿದ್ದ 3 ಜನ ಸಹಚರರು ತಮ್ಮ ಕೈಯಲ್ಲಿದ್ದ ಹರಿತವಾದ ತಲವಾರಗಳಿಂದ ನನಗೆ ಹಾಗೂ ಪಿ.ಎಸ್.ಐ. ಪಂಡಿತ ಮತ್ತು ಮನೋಹರ ಹೆಚ.ಸಿ ಗೆ ತಲವಾರ ದಿಂದ ಹೊಡೆಯುವ ಕಾಲಕ್ಕೆ ನಾವು ಸದರಿ ಹೆಚಸಿ ಮನೋಹರ ರವರನ್ನು ರಕ್ಷಿಸಿದೆವು. ಸದರಿ ಆರೋಪಿತರು ಪುನ: ಮುಂದುವರೆದು ಛೋಟ್ಯಾ ಹಾಗೂ ಆತನ ಸಹಚರರು ನಮ್ಮ ಮೇಲೆ ದಾಳಿ ಮಾಡಲು ಬಂದಾಗ ನನ್ನ ಹಾಗೂ ಪಿ.ಎಸ್.ಐ. ಮತ್ತು ಸಿಬ್ಬಂದಿಯವರ ಆತ್ಮ ರಕ್ಷಣೆಗಾಗಿ ನನ್ನಲ್ಲಿದ್ದ ಸರ್ವಿಸ ಪಿಸ್ತೂಲದಿಂದ ಗಾಳಿಯಲ್ಲಿ ಹಾಗೂ ನೆಲದ ಕಡೆಗೆ 3 ಸುತ್ತು ಗುಂಡು ಹಾರಿಸಿದೆನು. ಆಗ ಸದರಿ ಛೋಟ್ಯಾ ಊರ್ಫ ಆನಂದ ಊರ್ಫ ಪ್ರಿಯದರ್ಶನ ಇತನು ತಪ್ಪಿಸಿಕೊಂಡು ಕತ್ತಲಲ್ಲಿ ಓಡಿ ಹೋದೆನು. ಉಳಿದ ಮೂರು ಜನ ಆರೋಪಿತರನ್ನು ಹಿಡಿದುಕೊಂಡು ಅವರ ಹೆಸರು ಹಾಗೂ ವಿಳಾಸ ವಿಚಾರಿಸಲಾಗಿ ರವಿ ತಂದೆ ಮಾರುತಿ ಗಾರನ ವಯ : 27 ವರ್ಷ ಜಾತಿ ಕಬ್ಬಲಿಗೇರ ಉ:ಗೌಂಡಿ ಕೆಲಸ ಸಾ: ಬೆಂಗಳೂರ ಹಾ:ವಸ್ತಿ ಐನಾಪೂರ ತಾ: ಚಿಂಚೋಳಿ ಸಧ್ಯ ಶರಣ ಶಿರಸಗಿ, ಯಲ್ಲಾಲಿಂಗ ತಂದೆ ಮಾರುತಿ ಅಣ್ಣಿಗೇರ ವಯ :19 ವರ್ಷ ಜಾ: ಬೇಡರ ಉ:ಸೆಂಟ್ರಿಂಗ ಕೆಲಸ ಸಾ: ಶರಣ ಶಿರಸಗಿ ತಾ:ಜಿ: ಗುಲಬರ್ಗಾ, ಸುನೀಲ ತಂದೆ ಮಲ್ಲಿಕಾರ್ಜುನ ವಯ:19 ವರ್ಷ ಜಾತಿ ಹರಿಜನ ಉ:ಗೌಂಡಿ ಕೆಲಸ ಸಾ: ಚಿಮ್ಮು ಇದಲಾಯಿ ತಾ: ಚಿಂಚೋಳಿ ಹಾ:ವ|| ಪಂಚಶೀಲ ನಗರ ಗುಲಬರ್ಗಾ ಅಂತಾ ಹೇಳಿದರು, ಸದರಿ ಅರೋಪಿತರು ಛೊಟ್ಯಾ ಊರ್ಫ ಆನಂದ ಊರ್ಫ ಪ್ರಿಯದರ್ಶನ ಗಾಯಕವಾಡ ಮತ್ತು ಆತನ ಸಹಚರರು ನಮ್ಮ ಸಿಬ್ಬಂದಿ ಜನರ ಮೇಲೆ ಹಾಗೂ ನನ್ನ ಮೇಲೆ ತಲವಾರದಿಂದ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿದ ಅರೋಪಿತರನ್ನು ಮತ್ತು ತಲವಾರಗಳು, ಹಾಗೂ ಹೊಂಡಾ ಎಕ್ಟೀವ ಕೆ.ಎ.32 ಎಕ್ಸ.8038 ಮತ್ತು 3 ಮೋಬಾಯಿಲಗಳು ವರದಿಯೊಂದಿಗೆ ಹಾಜರು ಪಡಿಸಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DIST REPORTED CRIMES

ಅಪಘಾತ ಪ್ರಕರಣ :
ಶಹಾಬಾದ ನಗರ ಪೊಲೀಸ ಠಾಣೆ:
ಶ್ರೀ ರಾಘವೇಂದ್ರ ತಂದೆ ರಂಗರಾವ ದೇಶಪಾಂಡೆ ರವರು ಸಾ: ರೈಲ್ವೆ ಸ್ಷೇಷನ ಹತ್ತಿರ ಶಹಾಬಾದ ರವರು ನನ್ನ ತಮ್ಮನಾದ ದನಂಜಯ ಇತನು ಮೊಟಾರ ಸೈಕಲ ನಂ: ಕೆಎ-32 ಎಸ್.3128 ನೇದ್ದರ ಮೇಲೆ ಶಹಾಬಾದದಿಂದ ಜಗಜೀವನರಾಮ ಕ್ರಾಸ ಹತ್ತಿರ ಹೋಗುತ್ತಿದ್ದಾಗ ಒಮ್ಮೇಲೆ ಬ್ರೇಕ ಹಾಕಿದ್ದರಿಂದ ಮೊಟಾರ ಸೈಕಲ ಮೇಲಿಂದ ಬಿದ್ದು ಬಲಗಣ್ಣಿನ ಮೇಲೆ ಭಾರಿ ರಕ್ತಗಾಯವಾಗಿರುತ್ತದೆ. ಬಲಗಣ್ಣಿನ ಮೆಲಕಿನ ಮೇಲೆ ಭಾರಿ ರಕ್ತಗಾಯವಾಗಿ ಅವನು ಮಾತನಾಡುವ ಸ್ಥಿತಿಯಲ್ಲಿ ಇರದೆ ಇರುವದರಿಂದ ಹೈದ್ರಾಬಾದದ ಕಾಮಿನೆನಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದರೋಡೆ ಪ್ರಕರಣ:

ಅಶೋಕ ನಗರ ಪೊಲೀಸ್ ಠಾಣೆ : ಪ್ರೇಮಕುಮಾರ ತಂದೆ ಗೋಪಾಲ ಚವ್ಹಾಣ ರವರು ಸಾ: ನಿಂಬರ್ಗಾ ತಾಂಡಾ ಹಾ.ವ: ರೂಮ ನಂ. 33 ಕೊಕಣ ವಸಾದ ಬಿರ್ಲಾ ಕಾಲೇಜ ರೋಡ ಕಲ್ಯಾಣವ (ಪೂರ್ವ) ಜಿ: ಠಾಣೆ (ಮಹಾರಾಷ್ಟ್ರ ರಾಜ್ಯ) ರವರು ನ್ಯೂಜ ಪೇಪರದಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಗುಲಬರ್ಗಾದಲ್ಲಿ ಬಸ್ ಡ್ರೈವರ ಮತ್ತು ಬಸ್ ಕಂಡಕ್ಟರ್ ಹುದ್ದೆಗೆ ಅರ್ಜಿ ಹಾಕುವ ಸಲುವಾಗಿ ಗುಲಬರ್ಗಾಕ್ಕೆ ಬಂದು ನನ್ನ ಪರಿಚಯದವರಾದ ಕಿಶನ್ ರಾಠೋಡ ರವರಿಗೆ ಕರೆಯಿಸಿದಾಗ ಅವರು ಮದ್ಯಾಹ್ನ ಸುಮಾರಿಗೆ ಜೇವರ್ಗಿ ಕ್ರಾಸ (ರಾಷ್ಟ್ರಪತಿ ಸರ್ಕಲ್) ಹತ್ತಿರ ಬಂದು ಕೆ. ಎಸ್.ಆರ್.ಟಿ.ಸಿ. ಸ್ಲೀಪ್ ಕೊಟ್ಟರು. ನಂತರ ನಾನು ನಮ್ಮ ಸ್ವಗ್ರಾಮ ನಿಂಬರ್ಗಾ ತಾಂಡಾಕ್ಕೆ ಹೋಗಲು ಬಸ್ ಸ್ಟ್ಯಾಂಡ ಕಡೆಗೆ ಬರುತ್ತಿರುವಾಗ 2-30 ಗಂಟೆ ಸುಮಾರಿಗೆ ಸಂಗಮೇಶ್ವರ ಆಸ್ಪತ್ರೆ ಎದುರುಗಡೆ ರಸ್ತೆಯ ಮೇಲೆ ಇಬ್ಬರು ಅಪರಿಚಿತ 25 ರಿಂದ 30 ವಯಸ್ಸಿನ ವ್ಯಕ್ತಿಗಳು ಹಿಂದಿಯಲ್ಲಿ ಮಾತಾಡುತ್ತಾ ಬಂದವರೇ ಒಮ್ಮೇಲೆ ನನ್ನನ್ನು ತಡೆದು ನಿಲ್ಲಿಸಿ ಚಾಕುವಿನಿಂದ ಬಲಗೈ ರಟ್ಟೆಗೆ ಹೊಡೆದರು. ಮತ್ತು ಇನ್ನೊಬ್ಬ ಕೈ ಮುಷ್ಟಿ ಮಾಡಿ ಎದೆಗೆ ಗುದ್ದಿ " ನಿಕಾಲಬೇ ಸಾಲೆ ಕಿತನೇ ಹೈ ಪೈಸೆ " ಅಂತಾ ಅಂದವರೇ ಜಬರ ದಸ್ತಿಯಿಂದ ಜೇಬಿನಲ್ಲಿ ಕೈ ಹಾಕಿ ಪರ್ಸನಲ್ಲಿದ್ದ 1500=00 ರೂ. ಮತ್ತು ಒಂದು ಸೋನಿ ಎರೇಕ್ಷನ್ ಕಂಪನಿಯ ಮೋಬಾಯಿಲ್ ಫೋನ್ ಸಿಮ್ ನಂ. 09987462597 ಅ.ಕಿ. 5,000/- ರೂ. ನೇದ್ದವುಗಳನ್ನು ಕಸಿದುಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ:
ಫರಹತಾಬಾದ ಠಾಣೆ :
ಮಾಳಪ್ಪಾ ತಂದೆ ಸಾಯಬಣ್ಣಾ ಪೂಜಾರಿ ಸಾ: ಜೋಗೂರ ರವರು ನಾನು ಮನೆಯಲ್ಲಿ ಇದ್ದಾಗ ಅಮೋಗಿ ತಂದೆ ಸಾಯಬಣ್ಣಾ ಪೂಜಾರಿ ಸಂಗಡ ಒಬ್ಬರು ಇಬ್ಬರೂ ಸಾ: ಜೋಗೂರ ರವರು ಮನೆಯ ಹತ್ತಿರ ಬಂದು ಅವಾಚ್ಯ ಶಬ್ದಗಳಿಂದ ಬೈದು ಎದೆಯ ಮೇಲಿನ ಅಂಗಿ ಹಿಡಿದು ಸೂಳೆ ಮಗನೇ ಹೋಲ ಕೇಳುತ್ತಿ ಅಂತಾ ಬೈದು ತನ್ನ ಕೈಯಿಲ್ಲಿದ್ದ ಒಡ ಕಟ್ಟಿಗೆಯಿಂದ ನನ್ನ ತೆಲೆಗೆ ಹೊಡೆದು ರಕ್ತಗಾಯ ಮಾಡಿದನು ಇನ್ನೊಬರು ಇವರಿಗೆ ಬಹಳ ಸೋಕ್ಕು ಬಂದಿದೆ ಅಂತಾ ಬೈದು ಕೂದಲು ಹಿಡಿದು ಜಗ್ಗಾಡಿದರು ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಅಪಹರಣ ಪ್ರರಕಣ :
ರಾಘವೇಂದ್ರ ನಗರ ಪೊಲೀಸ್ ಠಾಣೆ
: ಮಹ್ಮದ ಅಜರ ಅವನ ಗೆಳೆಯರಾದ ಮಹ್ಮದ ಮೊಬಿನ್ ಹಾಗು ಫರೀದ ಮೂವರು ಕೂಡಿಕೊಂಡು ಶಟ್ಟಿಫನ್ ಟಾಕೀಸ್ ನಲ್ಲಿ ಸಿನೆಮಾ ನೋಡಲು ಹೋದಾಗ, ರಾತ್ರಿ 11 ಗಂಟೆಯ ಸುಮಾರಿಗೆ 8-10 ಜನರ ಗುಂಪು ಒಮ್ಮೆಲೆ ಕೂಗಾಡುತ್ತಾ, ಚಿರಾಡುತ್ತಾ ಟಾಕೀಸ ಒಳಗೆ ಬಂದು, ಅವರಲ್ಲಿಯ ಒಬ್ಬನು " ಭೋಸಡಿ ಮಗನ್ಯಾ ನನಗೆ ಏಕೆ ಗುರಾಯಿಸಿ ನೋಡುತ್ತಿ" ಅಂತ ನನ್ನ ಎದೆಯ ಮೇಲಿನ ಅಂಗಿ ಹಿಡಿದು ಜಗಳಕ್ಕೆ ಬಿದ್ದು, ಹೊಡೆ ಬಡೆ ಮಾಡ ಹತ್ತಿದರು. ಆಗ ನನ್ನ ಗೆಳೆಯ ಮಹ್ಮದ ಮೊಬಿನ್ ಮತ್ತು ಫರೀದ ಇವರು ಬಿಡಸಲು ಬಂದಾಗ ಅವರನ್ನು ಎಲ್ಲರೂ ಕೂಡಿಕೊಂಡು ಹೊಡೆ ಬಡೆ ಮಾಡಿ, ತಲವಾರದಿಂದ ಮಹ್ಮದ ಮುಬೀನ ಇವನ ತಲೆಯ ಹಿಂಬದಿಗೆ ಹೊಡೆಯಲು, ಅವನ ತಲೆಗೆ ರಕ್ತಗಾಯವಾಗಿ ರಕ್ತ ಸೋರ ಹತ್ತಿತು. ಅವರಲ್ಲಿ ಕಲವರು ಕೈಗಳಿಗೆ ಪಂಚ್ ಹಾಕಿಕೊಂಡು ಬೆನ್ನಿಗೆ ಹಾಗು ಟೊಂಕಕ್ಕೆ ಹೊಡೆದರು, ನಂತರ ಅವರೆಲ್ಲರೂ ಕೂಡಿಕೊಂಡು ಫರೀದ ಎಂಬುವವನ ಮೈಮೇಲಿನ ಬಟ್ಟೆಗಳನ್ನು ಬಿಚ್ಚಿಸಿ ಅವನಿಗೆ ಒಂದು ಜೀಪಿನಲ್ಲಿ ಒತ್ತಾಯದಿಂದ ಹಾಕಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದರೋಡೆ ಪ್ರಕರಣ:

ಅಶೋಕ ನಗರ ಪೊಲೀಸ್ ಠಾಣೆ : ಭೀಮಾಶಂಕರ ತಂದೆ ಶಿವಶರಣಪ್ಪಾ ಸಕಪಾಲ ಸಾ|| ನಂದಿಕೂರ ರವರು ನಾನು ಪೆಟ್ರೊಲ ಪಂಪದಲ್ಲಿ ಕ್ಯಾಸಿಯರ್‌ ಕೆಲಸ ಮಾಡುತ್ತಿದ್ದು ನನ್ನ ಜೊತೆಯಲ್ಲಿ ಮಹೇಶ, ಸಿದ್ದಾರೂಢ, ಸಿದ್ದು, ಚಂದ್ರಕಾಂತ ಹೆಲ್ಪರ ಇವರು ಸಹ ಇದ್ದರು. ಆಗ ಒಂದು ಕೆಂಪ್ಪು ಬಣ್ಣದ ಹೊಂಡಾ ಎಕ್ಟೀವ ಮೊಟರ ಸೈಕಲ ಮೇಲೆ ಛೋಟ್ಯ ಸಂಗಡ ಇನ್ನೊಬ್ಬ ಪೆಟ್ರೊಲ ಹಾಕುವಂತೆ ಹೇಳಿದರು ಆಗ ನಾನು 80 ರೂಪಾಯಿ ಪೆಟ್ರೊಲ ಹಾಕಿದ್ದೆ, ಆಗ ಅವನು 500 ರೂಪಾಯಿ ನೋಟ ಕೊಟ್ಟಿದನು. ಆಗ ನಾನು ಚಿಲ್ಲರ ಇಲ್ಲಾ ಅಂತಾ ಹೇಳಿ ಪೆಟ್ರೊಲ ಪಂಪ ಆಫೀಸ ಒಳಗಡೆ ಹೊದಾಗ ಅವನು ಕೈಯಲ್ಲಿ ತಲವಾರ ತೆಗೆದುಕೊಂಡು ಬಂದವನೇ ನನಗೆ ತಲವಾರದಿಂದ ಹೆದರಿಸಿ ತಾನು ಕೊಟ್ಟಿದ್ದ 500 ರೂಪಾಯಿ ನೊಟ ಜಬರ ದಸ್ತಿಯಿಂದ ನನ್ನ ಜೇಬಿನಲ್ಲಿ ಕೈ ಹಾಕಿ ಪೆಟ್ರೊಲ/ಡಿಸಲ್‌ ಕಲೇಕ್ಷನ ಹಣ ಕಸಿದುಕೊಂಡು ಹೊಗಿರುತ್ತಾರೆ. ಜೇಬಿನಲ್ಲಿ 500, 100, 50, 10 ರೂಪಾಯಿ ನೊಟಗಳು ಇದ್ದು ಒಟ್ಟು ಅಂದಾಜು 3000/- ರೂಪಾಯಿ ಇರುತ್ತವೆ. ನನ್ನ ಹತ್ತಿರ ಹಣ ಕಸಿದುಕೊಂಡ ನಂತರ ನಮ್ಮ ಪಂಪದಲ್ಲಿ ಪೆಟ್ರೊಲ ಎಣ್ಣೆ ಹಾಕಿಸಿಕೊಳ್ಳಲು ಬಂದಿದ್ದ ಒಬ್ಬ ಗ್ರಾಹಕರಿಗೆ ತಲವಾರದಿಂದ ಹೊಡೆದು ಗಾಯಗೊಳಿಸಿ ಅವನ ಕೊರಳಲ್ಲಿರುವ ಬಂಗಾರದ ಚೈನನ್ನು ಕಿತ್ತುಕೊಂಡು ಹೊಗಿರುತ್ತಾರೆ. ಇಬ್ಬರು ಹುಡುಗರು ಕೆಂಪ್ಪು ಬಣ್ಣದ ಹೊಂಡಾ ಎಕ್ಟೀವ ಗಾಡಿ ನಂ. ಕೆಎ 32-ಎಕ್ಸ-8038 ರ ಮೇಲೆ ಹೊಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುರಿ ಕಳ್ಳತನ :

ಮಾದನ ಹಿಪ್ಪರಗಾ ಠಾಣೆ :ಶ್ರೀ ಅಂಕುಶ ತಂದೆ ಪಾಂಡು ಖರಾತ ಉ: ಕುರಿ ಕಾಯುವದು ಸಾ: ಅರಕೇರಿ ತಾ: ಬಿಜಾಪೂರ್ ಜಿಲ್ಲಾ ರವರು ನಾವು ಬಿಜಾಪೂರದ ನಮ್ಮೂರಿನಿಂದ ಕುರಿಗಳು ಮೆಯಿಸುತ್ತಾ ಜೇವರ್ಗಿ, ಗುಲಬರ್ಗಾ ಸಿಮಾಂತರದಲ್ಲಿ ಕುರಿಗಳು ಮೇಯಿಸಿಕೊಂಡು ಆಳಂದ ತಾಲೂಕಿನ ಸಿಮಾಂತರದಲ್ಲಿ ಕುರಿ ಮೆಯಿಸುತ್ತಾ ನಮ್ಮ ಸ್ವಂತ ಊರಿಗೆ ಹೊಗಲು ಹೊರಟಿದ್ದೆವು ಹಿಗಿದ್ದು ದಿನಾಂಕ; 22/08/2011 ರಂದು ನಾವು ಆಳಂದ ತಾಲೂಕಿನ ಝಳಕಿ (ಕೆ) ಗ್ರಾಮದ ಬೊಗೇಶ್ವರ ಗುಡಿಯ ಹತ್ತಿರ ಇರುವು ವಾರಿಯಲ್ಲಿ ರಾತ್ರಿ ವಸತಿ ಮಾಡಿದೆವು ನಮ್ಮ ಕುರಿಗಳು ಒಟ್ಟಿಗೆ ಕೂಡಿಸಿದೆವು ನಾವು ರಾತ್ರಿ ಊಟ ಮಾಡಿ ಕುರಿಗಳು ಇದ್ದಲ್ಲಿಯೆ ಮಲಗಿಕೊಂಡೆವು ನಾವು ಮಲಗಿಕೊಂಡು ನಿದ್ದೆ ಮಾಡುವಾಗ ರಾತ್ರಿ ಸುಮಾರಿಗೆ ನಮ್ಮ ಹತ್ತಿರ ಇರುವ ನಾಯಿಗಳು ಬೊಗಳುತ್ತಿದ್ದ ಸಪ್ಪಳ ಕೇಳಿ ನನಗೆ ಎಚ್ಚರವಾಗಿ ನೊಡಲು ಕುರಿಗಳು ಎದ್ದು ನಿಂತಿದ್ದವು ನಂತರ ನಾನು ಮಲಗಿಕೊಂಡೆನು ಮುಂಜಾನೆ ನಮ್ಮ ಕುರಿಗಳು ಬೇರೆ ಮಾಡಿಕೊಂಡು ಲೆಕ್ಕ ಮಾಡಲಾಗಿ ನನ್ನ 14 ಕುರಿಗಳು ಇದ್ದಿರಲ್ಲಿಲ್ಲಾ ಯಾರೋ ಕಳ್ಳರು ರಾತ್ರಿ ನಮಗೆ ನಿದ್ರೆ ಹತ್ತಿದಾಗ ನನ್ನ 14 ಕುರಿಗಳು ಕಳವು ಮಾಡಿಕೊಂಡು ಹೊಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.