POLICE BHAVAN KALABURAGI

POLICE BHAVAN KALABURAGI

25 November 2011

Gulbarga Dist Reported Crime

ಹಲ್ಲೆ ಪ್ರಕರಣ:

ನಿಂಬರ್ಗಾ ಪೊಲೀಸ ಠಾಣೆ: ಶ್ರೀಮತಿ ಕಾಂತಾಬಾಯಿ ಗಂಡ ಗೌರಿಶಂಕರ ದೇಶಟ್ಟಿ ಸಾ|| ದೇವಂತಗಿ ರವರು ನಮ್ಮ ಮನೆಗೆ ಪಕ್ಕದಲ್ಲಿ ಶರಣಬಸಪ್ಪ ತಂದೆ ತಿಪ್ಪಣ್ಣಾ ದೇಶಟ್ಟಿ ಮನೆ ಇದ್ದು ಇಬ್ಬರೂ ಅಣ್ಣತಮ್ಮಂದಿರಾಗಬೇಕು ಮನೆಯ ಮುಂದಿನ ಕಟ್ಟೆಯು ಇಬ್ಬರ ಮಧ್ಯದಲ್ಲಿದ್ದು ಮಹಾದೇವಿ ಗಂಡ ತಿಪ್ಪಣ್ಣಾ ಇವಳು ಬಟ್ಟೆ ಒಗೆದ ನೀರು ಕಟ್ಟೆಯ ಮೇಲೆ ಚೆಲ್ಲಿದ್ದು, ಚೆಲ್ಲಿದ್ದ ನೀರು ನಮ್ಮ ಮನೆಯ ಒಳಗೆ ಹೋಗಿದ್ದರಿಂದ ಕೇಳಿದ್ದಕ್ಕೆ ಶರಣಬಸಪ್ಪನು ಅವಾಚ್ಯ ಶಬ್ದಗಳಿಂದ ಬೈದು ಬಡಿಗೆಯಿಂದ ಬಲಗೈ ಹಸ್ತದ ಹತ್ತಿರ, ಮುಂಗೈ ಹತ್ತಿರ ಮತ್ತು ಬಲಗೈ ಮುಂಡೆಗೆ ಹೊಡೆದು ಸಾದಾ ಮತ್ತು ಭಾರಿ ಗುಪ್ತ ಗಾಯಪಡಿಸಿದ್ದು ಮತ್ತು ಮಾನ ಭಂಗ ಮಾಡುವ ಉದ್ದೇಶದಿಂದ ಅವರ ತಲೆಯ ಕೂಡಲು ಹಿಡಿದ್ದು ಬಗ್ಗಿಸಿ ಬೆನ್ನ ಮೇಲೆ ಹೊಡೆದಿದ್ದು, ಮತ್ತು ಮಹಾದೇವಿ ಇವಳು ಸಹ ಹೊಡೆದು ಗುಪ್ತಗಾಯಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 123/2011 ಕಲಂ.323, 324,354, 504, 506 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

Gulbarga Dist Reported Crime

ಮಟಕಾ ಪ್ರಕರಣ:

ನಿಂಬರ್ಗಾ ಪೊಲೀಸ ಠಾಣೆ: ದಿನಾಂಕ 24/11/2011 ರಂದು ಸಾಯಂಕಾಲ 7-00 ಗಂಟೆಯ ಸುಮಾರಿಗೆ ನಿಂಬರ್ಗಾ ಗ್ರಾಮದ ಅಂಬೇಡ್ಕರ ವೃತ್ತದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಚಿದಾನಂದ ತಂದೆ ಬಾಬುರಾವ ಕಾಂಬಳೆ ಸಾ|| ನಿಂಬರ್ಗಾ ತಾ|| ಆಳಂದ ಇತನು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ಮಟಕಾ ಆಡಿರಿ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಜನರಿಗೆ ಹೇಳುತ್ತಾ ಹಣ ಪಡೆದು ಮಟಕಾ ಜೂಜಾಟ ಬರೆದುಕೊಳ್ಳುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪಂಚರ ಜೋತೆ ಪಿ.ಎಸ.ಐ ಶ್ರೀ ಎಸ್.ಎಸ್ ದೊಡ್ಡಮನಿ ಮತ್ತು ಠಾಣೆಯ ಸಿಬ್ಬಂದಿಯರಾದ ದೇವಿಂದ್ರಪ್ಪ ಎ.ಎಸ್.ಐ. ನಿಸಾರ ಅಹಮದ ಸಿಪಿಸಿ, ಶಿವರಾಯ ಸಿಪಿಸಿ ರವರು ಕುಡಿಕೊಂಡು ಮಟಾಕಾ ಬರೆಡುಕೊಳ್ಳುತ್ತಿದ್ದ ಶ್ರೀ ರಾಜಶೇಖರ ತಂದೆ ಶಂಕರ ಹೊನಗುಂಡ ಸಾ|| ನಿಂಬರ್ಗಾ ಮತ್ತು ಶ್ರೀ ಬಸವರಾಜ ತಂದೆ ನಾಗಪ್ಪ ಕೋರೆ ಸಾ|| ನಿಂಬರ್ಗಾ ಇವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ನಗದು ಹಣ 570/- ರೂ, ಪೆನ್ನು, ಹಾಗೂ ಮಟಕಾ ಚೀಟಿ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದು ಅಲ್ಲದೇ ಮಟಕಾ ಚೀಟಿ ತೆಗೆದುಕೊಳ್ಳುವರಾದ ರಪೀಕ ಸಾ|| ಬೈರಾಮಡಗಿ ಮತ್ತು ಚಿದಾನಂದ ತಂದೆ ಬಾಬುರಾವ ಕಾಂಬಳೆ ಸಾ|| ನಿಂಬರ್ಗಾ ತಾ|| ಆಳಂದ ಇವರ ಮೇಲೆ ಕ್ರಮ ಕೈಕೊಳ್ಳುವ ಕುರಿತು ಠಾಣೆ ಗುನ್ನೆ ನಂ. 122/2011 ಕಲಂ 78(3) ಕೆ.ಪಿ ಆಕ್ಟ ಮತ್ತು 420 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.