POLICE BHAVAN KALABURAGI

POLICE BHAVAN KALABURAGI

30 April 2013

GULBARGA DISTRICT REPORTED CRIMES


ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ಡಾ|| ಮಣ್ಣೂರ ಕೃಷಿ ವಿಜ್ಞಾನಿ ಕೃಷಿ ಸಂಶೋದನಾ ಕೇಂದ್ರ ಗುಲಬರ್ಗಾ ಮತ್ತು ಮ್ಯಾಜಿಸ್ಟ್ರೆಟರ  ಫ್ಲೈಯಿಂಗ ಸ್ಕ್ಯಾಡ್ ಎಂ.ಸಿ.ಸಿ ಅಧಿಕಾರಿ 44-ಗುಲಬರ್ಗಾ ದಕ್ಷಿಣ ಮತಕ್ಷೇತ್ರ ಗುಲಬರ್ಗಾರವರು ದಿನಾಂಕ:29-04-2013 ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ ಜೇವರ್ಗಿ ಕ್ರಾಸ  ಹತ್ತಿರದ  ಎಸ್‌.ಕೆ ಯಾತ್ರಿಕ ನಿವಾಸ ಹಿಂದುಗಡೆ  ಭಗವತಿ ನಗರದಲ್ಲಿ  ಹೋಗುತ್ತಿರುವಾಗ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿರುವ ವಿದ್ಯುತ ಕಂಬಗಳ  ಮೇಲೆ  ಜೆ.ಡಿ.ಎಸ್‌ ಪಕ್ಷದ ಅಭ್ಯರ್ಥಿ  ಶ್ರೀ, ಶಶಿಲ ಜಿ.ನಮೊಶಿ, ಮತ್ತು ಶ್ರೀ ಹೆಚ್‌.ಡಿ ಕುಮಾರಸ್ವಾಮಿ ರವರ ಭಾವಚಿತ್ರ ಮತ್ತು ಪಕ್ಷದ ಚಿಹ್ನೆವುಳ್ಳ  ಸ್ಟಿಕ್ಕರ (ಪಾಂಪ್ಲೇಂಟ)ಗಳನ್ನು ಅಂಟಿಸಿ ಚುನಾವಣೆ ನೀತಿ ಸಂಹಿತೆಯನ್ನು ಉಲ್ಲಂಘಿಸಿರುತ್ತಾರೆ. ಕಾರಣ ಜೆ.ಡಿ.ಎಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಶಶೀಲ ಜಿ.ನಮೋಶಿ ರವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:75/2013 ಕಲಂ ಕಲಂ, 3 ಕರ್ನಾಟಕ ಒಪನ ಪ್ಲೇಸ್‌  (ಪ್ರಿವೇನಶನ ಆಫ್‌ ಡಿಸಫೀಗರಮೆಂಟ) ಆಕ್ಟ 1981 ರ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀಮತಿ ಮಿನಾಕ್ಷಿ ಗಂಡ ಸಿದ್ರಾಮಪ್ಪಾ ಪಡಶೆಟ್ಟಿ ವಯಾ: 50 ವರ್ಷ   ಸಾ|| ಶಿವಪಾರ್ವತಿ ನಗರ ಸಂತೋಷ ಕಾಲೋನಿ ಗುಲಬರ್ಗಾರವರು ನಾನು ಮತ್ತು ಸುಶೀಲಾ ರವರು ದಿನಾಂಕ:29-04-2013 ರಂದು   ಮಧ್ಯಾಹ್ನ 3-30 ಗಂಟೆಗೆ ಅಟೋರಿಕ್ಷಾ ನಂಬರ ಕೆಎ-32 ಎ- 5603 ನೇದ್ದರಲ್ಲಿ ಕುಳಿತು ಮನೆಯ ಕಡೆಗೆ ಬರುತ್ತಿರುವಾಗ ಅಟೋರಿಕ್ಷಾ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಜೇವರ್ಗಿ ರೋಡಿನ ಅಂಭಾ ಭವಾನಿ ಗುಡಿಯ ಹತ್ತಿರ ರೋಡ ಡೆವೈಡರಕ್ಕೆ ಡಿಕ್ಕಿ ಪಡಿಸಿದ್ದರಿಂದ ನನಗೆ ಮತ್ತು ಸುಶೀಲಾ ಇವರಿಗೆ  ಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ  ಠಾಣೆ ಗುನ್ನೆ ನಂ:30/2013 ಕಲಂ:279, 337  ಐ.ಪಿ.ಸಿ. ಸಂಗಡ 187 ಐ,ಎಮ್,ವಿ ಆಕ್ಟ  ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ: ಶ್ರೀ ಸೂರ್ಯಕಾಂತ  ತಂದೆ  ತಿಪ್ಪಣ್ಣಾ ಸುಣ್ಣಗಾರ ಸಾ: ಫಿರೋಜಬಾದ ತಾ: ಗುಲಬರ್ಗಾ ರವರು  ನನ್ನ ತಮ್ಮ ದತ್ತು ಇತನು ಟಿ.ವ್ಹಿ.ಎಸ್. ಮೋಟಾರ ಸೈಕಲ ನಂ ಕೆ.ಎ-32-ಎಕ್ಸ್-8552 ನೆದ್ದರ ಮೇಲೆ ನನ್ನ ಮಗ ರಾಜು ಇತನಿಗೆ ಮೊಟಾರ ಸೈಕಲ ಹಿಂದೆ ಕೂಡಿಸಿಕೊಂಡು ದಿನಾಂಕ:29-04-2013 ರಂದು ಮದ್ಯಾಹ್ನ 3-00 ಗಂಟೆಗೆ ಜೇವರಗಿ – ಗುಲಬರ್ಗಾ ಮೇನ್ ರೋಡ ಲಕ್ಷ್ಮೀ ಗುಡಿ ಕ್ರಾಸ ಹತ್ತಿರ ರೋಡಿನಲ್ಲಿ ಜೇವರಗಿ ಕಡೆಯಿಂದ ಗುಲಬರ್ಗಾದ ಕಡೆಗೆ ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಒಮ್ಮಲೇ ಕಟ್ ಹೊಡೆದು ರೋಡಿನಲ್ಲಿದ್ದ ಗೂಟದ ಕಲ್ಲಿಗೆ ಡಿಕ್ಕಿ ಹೊಡೆದು ಮೋಟಾರ ಸೈಕಲದೊಂದಿಗೆ ಕೆಳಗೆ ಬಿದ್ದು ಭಾರಿಗಾಯ ಹೊಂದಿದ್ದು, ಉಪಚಾರ ಕುರಿತು ಗುಲಬರ್ಗಾಕ್ಕೆ  ತೆಗೆದುಕೊಂಡು ಹೋಗುತ್ತಿದ್ದಾಗ ದತ್ತು ಇತನು ಸಾಯಂಕಾಲ 5-00 ಗಂಟೆಗೆ ಮಾರ್ಗ ಮದ್ಯ ಮೃತ ಪಟ್ಟಿರುತ್ತಾನೆ. ರಾಜು ಇತನಿಗೆ ಭಾರಿ ಗಾಯಗಳಾಗಿರುತ್ತವೆ ಅಂತಾ ಸೂರ್ಯಕಾಂತ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:93/2013 ಕಲಂ 279, 338, 304(ಎ) ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. 

29 April 2013

GULBARGA DISTRICT REPORTED CRIMES


ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ:
ಸೇಡಂ ಪೊಲೀಸ್ ಠಾಣೆ: ಶ್ರೀ. ಎಮ್. ರಮೇಶ ಫ್ಲೈಯಿಂಗ್ ಸ್ಕ್ವಾಡ್ ಕೋಡ್ಲಾ ಹೋಬಳಿ ಸೇಡಂ-41 ವಿಧಾನಸಭಾ ಮತ ಕ್ಷೇತ್ರದ ಅಧಿಕಾರಿಯವರು ನಾನು ನಮ್ಮ ತಂಡದವರೊಂದಿಗೆ ದಿನಾಂಕ:28-04-2013 ರಂದು ಸಾಯಾಂಕಾಲ 7-30 ಗಂಟೆಗೆ ಕೊಡ್ಲಾ ಹೋಬಳಿಯ ಗೌಡನಳ್ಳಿ ಗ್ರಾಮದ ಕಡೆಗೆ ಹೋರಟಾಗ ಗ್ರಾಮದ ಮುಖ್ಯ ರಸ್ತೆಯ ಎರಡು ವಿದ್ಯುತ್ ಕಂಬಗಳ ಮೇಲೆ ಕೆ.ಜಿ.ಪಿ. ಪಕ್ಷದ ಅಭ್ಯಾರ್ಥಿಯಾಗಿ ಶ್ರೀ. ವೈಜನಾಥ ಪಾಟೀಲ್ ರವರು ಸ್ಪರ್ಧಿಸಿರುವ  ಪಕ್ಷದ ಸ್ಟಿಕರಗಳನ್ನು ಅಂಟಿಸಿರುವದು ಕಂಡು ಬಂದಿರುತ್ತದೆ. ಕಾರಣ ಈ ಘಟನೆಯು ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆಯಾಗಿರುತ್ತದೆ ಅಂತಾ ವರದಿ ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ-105/2013 ಕಲಂ-[3] The Karnataka Open Places (Prevention of Disfigurement ) Act 1981  ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ:
ಸೇಡಂ ಪೊಲೀಸ್ ಠಾಣೆ:ದಿನಾಂಕ:28-04-2013 ರಂದು ರಾತ್ರಿ 8-00 ಗಂಟೆಗೆ ಕೊಡ್ಲಾ ಗ್ರಾಮದಲ್ಲಿ ಹೊರಟಾಗ ಗ್ರಾಮದ ರಸ್ತೆಯಲ್ಲಿ ಬಿ.ಎಸ್.ಆರ್ ಪಕ್ಷದ ಅಭ್ಯರ್ಥಿಯಾಗಿರುವ  ಶ್ರೀ. ಕನ್ನಯ್ಯ ಮದನಾ ದೇಶಮುಖ ರವರು ಬಿ.ಎಸ.ಅರ್. ಪಕ್ಷದ ಚಿಹ್ನೆಯಿರುವ ಸ್ಟಿಕರಗಳನ್ನು ಅಂಟಿಸಿರುವದನ್ನು ಕಂಡು ಬಂದಿರುತ್ತದೆ. ಆದ್ದರಿಂದ ಬಿ.ಎಸ್.ಆರ್. ಪಕ್ಷದ ಅಭ್ಯರ್ಥಿಯು ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆ ಮಾಡಿರುತ್ತಾರೆ ಅಂತಾ ಶ್ರೀ. ಎಮ್. ರಮೇಶ ಫ್ಲೈಯಿಂಗ್ ಸ್ಕ್ವಾಡ್ ಕೋಡ್ಲಾ ಹೋಬಳಿ ಸೇಡಂ-41 ವಿಧಾನಸಭಾ ಮತ ಕ್ಷೇತ್ರದ ಅಧಿಕಾರಿಗಳು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ-106/2013 ಕಲಂ- [3] The Karnataka Open Places (Prevention of Disfigurement ) Act 1981  ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ:
ಸೇಡಂ ಪೊಲೀಸ್ ಠಾಣೆ: ದಿನಾಂಕ:28-04-2013 ರಂದು ರಾತ್ರಿ 8-15 ಗಂಟೆಗೆ ಪ್ಲಾಯಿಂಗ್ ಸ್ಕ್ವಾಡ ಅಧಿಕಾರಿಗಳು ತಮ್ಮ ತಂಡದೊಂದಿಗೆ ಕರ್ತವ್ಯದ ಮೇಲೆ ಗಸ್ತು ತಿರುಗುತ್ತಿದ್ದಾಗ ಕೊಡ್ಲಾ ಗ್ರಾಮದ ಹುಲಗೋಳನ ಮುಖ್ಯರಸ್ತೆಯಲ್ಲಿಯ ಒಂದು ಅಂಗಡಿಯ ಮೇಲೆ ಕೆ.ಜಿ.ಪಿ. ಪಕ್ಷದ ಚಿಹ್ನೆ ಇರುವ ಸ್ಟಿಕರಗಳನ್ನು ಅಂಟಿಸಿದ್ದು ಗಮನಿಸಿರುತ್ತಾರೆ. ಕೆ.ಜಿ.ಪಿ ಪಕ್ಷದ ವತಿಯಿಂದ ಶ್ರೀ. ವೈಜನಾಥ ಪಾಟೀಲ್ ರವರು ಸ್ಪರ್ದಿಸಿರುವದರಿಂದ ಸದರಿಯವರು ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆ ಮಾಡಿರುತ್ತಾರೆ. ಅಂತಾ ಶ್ರೀ. ಎಮ್. ರಮೇಶ ಫ್ಲೈಯಿಂಗ್ ಸ್ಕ್ವಾಡ್ ಕೋಡ್ಲಾ ಹೋಬಳಿ ಸೇಡಂ-41 ವಿಧಾನಸಭಾ ಮತ ಕ್ಷೇತ್ರದ ಅಧಿಕಾರಿಗಳು ವರದಿ ಸಲ್ಲಿಸಿದ್ದರ ಮೇಲಿಂದ ಠಾಣೆ ಗುನ್ನೆ ನಂ-107/2013 ಕಲಂ-[3] The Karnataka Open Places (Prevention of Disfigurement ) Act 1981  ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. 

GULBARGA DISTRICT REPORTED CRIME


ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ:ಶ್ರೀ, ಆನಂದ ತಂದೆ ಗಂಗಪ್ಪಾ ಯಳಸಂಗಿ ಸಾ;ಗುಡುರ ತಾ;ಆಫಜಲಪೂರ  ಜಿ;ಗುಲಬರ್ಗಾರವರು ನನ್ನ ತಮ್ಮನಾದ ಅಶೋಕ ತಂದೆ ಗಂಗಪ್ಪಾ ಯಳಸಂಗಿ ಇತನು  ಔರಂಗಾಬಾದನಲ್ಲಿ ಖಾಸಗಿ  ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಆಗಾಗ ಊರಿಗೆ ಬಂದು ಹೋಗುವದು ಮಾಡುತ್ತಿದ್ದ. ದಿನಾಂಕ:27-04-2013 ರಂದು ನನ್ನ ತಮ್ಮ ಅಶೋಕ ಇತನು  ಔರಂಗಬಾದದಿಂದ ಗುಲಬರ್ಗಾಕ್ಕೆ ಬಂದು ತನ್ನ ಗೆಳೆಯನ ರೂಮಿನಲ್ಲಿ ಉಳಿದುಕೊಂಡಿದ್ದನು.ದಿನಾಂಕ:28-04-2013 ರಂದು ಸಾಯಂಕಾಲ ಗುಡುರ ಗ್ರಾಮಕ್ಕೆ ಹೋಗುತ್ತೇನೆ ಅಂತಾ ಮಾತನಾಡಿದನು. ರಾತ್ರಿ  ನಾನು ರೂಮಿನಲ್ಲಿರುವಾಗ  ನನ್ನ ಗೆಳೆಯನಾದ ಶಾಂತಪ್ಪಾ ಸಾವಳಗಿ ಇತನು ನಿಮ್ಮ ತಮ್ಮನಾದ ಅಶೋಕ ಇತನು ತನ್ನ ಗೆಳೆಯನಾದ ಭೀಮಾಶಂಕರ ರಾಂಪೂರ ಇವರ ಮೋಟಾರ ಸೈಕಲ ನಂಬರ ಕೆಎ-32 ಆರ್-9416 ನೇದ್ದರ ಮೇಲೆ ಗುಲಬರ್ಗಾದಿಂದ ಗುಡುರ ಗ್ರಾಮಕ್ಕೆ  ಹೋಗುತ್ತಿರುವಾಗ ಕೇರಿ ಬೋಸಗಾ ಕ್ರಾಸ್ ನಂತರಕೆಎ-32 ಎ-5462 ನೇದ್ದರ ಲಾರಿ ಚಾಲಕನು ತನ್ನ ಲಾರಿಯನ್ನು ಯಾವದೇ ಮುನ್ಸೂಚನೆ ಲೈಟ ಹಾಕದೆ ಲೋಡ ಲಾರಿ ರೋಡಿಗೆ ನಿಲ್ಲಿಸಿದ್ದು ಗಮನಿದ ಇವರು ಲಾರಿಯ ಹಿಂದುಗಡೆ ಡಿಕ್ಕಿ ಹೊಡೆದಿರುತ್ತಾರೆ. ಮೋಟಾರ ಸೈಕಲ್ ಚಲಾಯಿಸುತ್ತಿದ್ದ ಅಶೋಕ ತಂದೆ ಗಂಗಪ್ಪಾ ಯಳಸಂಗಿ ಉ||ಇಂಜನಿಯರ  ಸಾ; ಗುಡುರ ತಾ;ಅಫಜಲಪೂರ ಜಿ;ಗುಲಬರ್ಗಾ ಇತನಿಗೆ ತಲೆಗೆ ಭಾರಿರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು, ಭೀಮಾಶಂಕರ ತಂದೆ  ಹಣಮಂತರಾಯ  ಸುರಪೂರ ಡಿಪ್ಲೋಮಾ ವಿದ್ಯಾರ್ಥಿ ಸಾ; ರಾಂಪೂರ ಹಳ್ಳಿ ಇತನಿಗೂ ಭಾರಿಗಾಯವಾಗಿದ್ದು, ಉಪಚಾರ ಕುರಿತು 108 ಅಂಬುಲೇನ್ಸ ವಾಹನದಲ್ಲಿ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿ ಮೃತ ಪಟ್ಟಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:219/2013  ಕಲಂ. 279 304 (ಎ),283, ಐಪಿಸಿ ಸಂಗಡ  187 ಐಎಂವಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

27 April 2013

GULBARGA DISTRICT REPORTED CRIMES


ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ:
ನೆಲೋಗಿ ಪೊಲೀಸ ಠಾಣೆ:ದಿನಾಂಕ:26/04/2013 ರಂದು ಮಂದೇವಾಲ ಗ್ರಾಮದ ಹತ್ತಿರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಚುನಾವಣಾ ಪ್ರಚಾರ ಕಾರ್ಯಕ್ರಮಪ್ರಯುಕ್ತ ಶ್ರೀ ಮಾಜಿ ಮುಖ್ಯಮಂತ್ರಿಗಳಾದ ಧರ್ಮಸಿಂಗ್ ಹಾಗೂ ಕೇಂದ್ರ ಮಂತ್ರಿಯಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ವರು ಚುನಾವಣಾ ಪ್ರಚಾರದ ನಿಮಿತ್ಯ ಅಭ್ಯರ್ಥಿಯಾದ ಡಾ:ಅಜೆಯಸಿಂಗ್ ವರಪರವಾಗಿ ಚುನಾವಣೆ ಪ್ರಚಾರ ಕೈಕೊಂಡಿದ್ದರಿಂದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾದ ಡಾ||| ಅಜಯಸಿಂಗ್ ಹಾಗೂ ದಾಬಾದ ಮಾಲಿಕ ಮಹಿಬೂಬಸಾಬ ರವರು ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಿರುವದರಿಂದ ಚುನಾವಣೆ ನೀತಿ ನೀತಿ ಸಂಹಿತೆ ಉಲ್ಲಂನೆಯಾಗಿರುತ್ತದೆ ಅಂತಾ ಶ್ರೀ,ಕೆ ಎಸ್ ಬೀದರಕರ್ ಅಭಿವೃದ್ದಿ ಅಧಿಕಾರಿಗಳು ಕೆ..ಡಿ.ಬಿಮತ್ತು ಜೇರ್ಗಿ ನೇಲೋಗಿ ಹೊಬಳಿಯ ಫ್ಲೈಯಿಂಗ್ ಸ್ಕ್ವಾಡ್ ಚುನಾವಣೆ ಅಧಿಕಾರಿ ಗುಲಬರ್ಗಾರವರು ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ:63/2013 ಕಲಂ 171 (ಇ) ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ದಿನಾಂಕ:26/04/2013 ರಂದು  ರಾಯಚೂರ ದಿಂದ  ರೈಲ್ವೆ ಮೂಲಕ ಗುಲಬರ್ಗಾ ರೈಲ್ವೆ ನಿಲ್ದಾಣಕ್ಕೆ ಬಂದು, ನನ್ನ ತಮ್ಮನಾದ  ಮಹ್ಮದ ಸುಲ್ತಾನ ಮೊಹಿಯೊದ್ದಿನ ರವರ “DELL LAPTOP”ನ್ನು ನನ್ನ ಕೆಲಸದಸಲುವಾಗಿತೆಗೆದುಕೊಂಡಿದ್ದುಖಾಸಗಿ ಕೆಲಸ ಮುಗಿಸಿಕೊಂಡು  ಬೀದರಕ್ಕೆ ಹೊಗುವ ಸಂಬಂಧ  ಗುಲಬರ್ಗಾ ಕೇಂದ್ರ ಬಸ ನಿಲ್ದಾಣಕ್ಕೆ ಬಂದು ರಾತ್ರಿ 8-25 ಗಂಟೆ ಸುಮಾರಿಗೆ  ಪ್ಲಾಟ ಫಾರಂ ದಲ್ಲಿ ನಿಂತಿರುವ ರಾಜಹಂಸ ಬಸ್ ನಂ.ಕೆಎ 38-ಎಫ್‌-587 ರಲ್ಲಿ ಸೀಟಿನ ಮೇಲೆ ನನ್ನ ಲಗೇಜ ಬ್ಯಾಗ ಮತ್ತು ಡೇಲ ಲ್ಯಾಪಟಾಪ  ಬ್ಯಾಗ ಇಟ್ಟು  ಮೂತ್ರ ವಿಸರ್ಜನೆ ಮಗುಗಿಕೊಂಡು ಮರಳಿ ಬಂದು ನೊಡಲು ನನ್ನ ಲ್ಯಾಪಟಾಪ ಬ್ಯಾಗ ಇರಲಿಲ್ಲ. ಯಾರೋ ಕಳ್ಳರು DELL LAPTOP   ಅ||ಕಿ|| 35,000/-ರೂಪಾಯಿಗಳ ಮೌಲ್ಯದ್ದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ಮಹ್ಮದ ಹಸನ್ ಮುಲ್ಲಾ ತಂದೆ ಡಿ.ಹೆಚ್.ಮುಲ್ಲಾ ಸಾ: ಅಜಾದ ನಗರ ರಾಯಚೂರ  ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ; 73/2013 ಕಲಂ, 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ:ದಿನಾಂಕ:26-04-13 ರಂದು ಮಧ್ಯಾಹ್ನ 12-15 ಗಂಟೆ ಸುಮಾರಿಗೆ ಶ್ರೀ ಡಾ: ಡಿ.ಎಂ. ಮಣ್ಣೂರು ಮ್ಯಾಜಿಸ್ಟ್ರೇರ ಸ್ಕಾಡ ಎಂ.ಸಿ.ಸಿ. ಮಾದರಿ ಚುನಾವಣೆ ನೀತಿ ಸಂಹಿತೆ ಅಧಿಕಾರಿ ಗುಲಬರ್ಗಾ ರವರು ಮತ್ತು ಎಂ.ಸಿ.ಸಿ. ತಂಡದ ಸಿಬ್ಬಂದಿಯವರು ಚುನಾವಣೆ ವಿಕ್ಷಣೆ ಮಾಡುತ್ತ ಹುಸೇನ ಗಾರ್ಡ ಹತ್ತಿರ ಹೋದಾಗ ನಂಬರ ಇಲ್ಲದಿರುವ ಇನೋವಾ ಕಾರ ಅದರ ಗ್ಲಾಸ್ ಮೇಲೆ ಹಸ್ತದ ಚೆನ್ಹೆವಿರುವ ಸ್ಟೀಕರ ಅಂಟಿಸಲಾಯಿತು. ಕಾರಿನ ಚಾಲಕನಾದ ಸಂಜೆಯ ಇತನಿಗೆ ವಿಚಾರಿಸಲು ಆತನು ನಮ್ಮ ಮಾಲಿಕನಾದ ಇರ್ಶಾದ ಜಾಹಾಗೀರದಾರ ರವರಿಗೆ ವಿಚಾರಿಸಲು ಹೇಳಿದನು. ನಾನು ಮಾಲಿಕನಾದ ಜಾಹಾಗಿರದಾರ ಸಾ|| ಪೂಣೆ ಇವನಿಗೆ ವಿಚಾರಿಸಲು ಅವನು ನಮ್ಮ ಹತ್ತಿರ ಯಾವದೇ ಪರವಾನಿಗೆ ಇಲ್ಲಾ ನೀವು ಯಾರೂ ಕೇಳುವದಕ್ಕೆ ಅಂತಾ ಮಾತನಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ:61/2013 ಕಲಂ, 188 ಐಪಿಸಿ ಮತ್ತು 127 (ಎ) 133 ಆರ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜಬರಿ ಸಂಭೋಗ ಮತ್ತು ಜಾತಿ ನಿಂದನೆ ಪ್ರಕರಣ:
ಮಹಿಳಾ ಪೊಲೀಸ್ ಠಾಣೆ: ನಾನು ಈ ಹಿಂದೆ ಹೀರಾಪೂರ ಕ್ರಾಸ್ ಹತ್ತಿರವಿರುವ ಶಾಲೆಯಲ್ಲಿ 8 ನೇ ತರಗತಿಯಿಂದ 10 ನೇ ತರಗತಿಯವರಿಗೆ ವ್ಯಾಸಾಂಗ ವಿದ್ಯಾಭ್ಯಾಸ ಮಾಡುತ್ತಿರುವ ಸಮಯದಲ್ಲಿ ಅದೇ ಶಾಲೆಯಲ್ಲಿ ದೈಹಿಕ ಶಿಕ್ಷಕನಾಗಿದ್ದ ಅನಂತರಾಜ ತಂದೆ ಗುರಣ್ಣಾ ಸಾ:ಶಹಾಬಜಾರ ಅಕ್ಕಮಹಾದೇವಿ ಗುಡಿ ಹತ್ತಿರ ಗುಲಬರ್ಗಾ ರವರು ನನಗೆ ಪ್ರೀತಿಸುತ್ತೆನೆ ಅಂತಾ ಹೇಳಿ ಬೀದರಗೆ ಹಾಗೂ ಬಿಜಾಪೂರಕ್ಕೆ ಕರೆದುಕೊಂಡು ಹೋಗಿ ಲಾಡ್ಜದಲ್ಲಿ ಜಬರಿ ಸಂಭೋಗ ಮಾಡಿರುತ್ತಾನೆ. ಮತ್ತು ನಿನಗೆ ಮದುವೆಯಾಗುತ್ತೆನೆ ಅಂತಾ ಹೇಳಿ ತನ್ನ ಮನೆಗೆ ಕರೆದುಕೊಂಡು ಹೋಗಿ ಸಂಭೋಗ ಮಾಡಿರುತ್ತಾನೆ. ಗರ್ಭಿವತಿಯಾದಾಗ ಮಾತ್ರಗಳನ್ನು ಕೊಟ್ಟು ಗರ್ಭಪಾತ ಮಾಡಿಸಿರುತ್ತಾನೆ. 2 ನೇ ಸಲ  ಗರ್ಭವತಿಯಾದ ಸಿದ್ದಿ ಭಾಷಾ ದರ್ಗಾ ಹತ್ತಿರ ಬಂದು ಗರ್ಭಪಾತ ಮಾಡಿಕೋ ಅಂತಾ ಜಗಳ ತೆಗೆದು ಕಾಲಿನಿಂದ ಹೊಟ್ಟೆಗೆ ಒದ್ದಿರುತ್ತಾನೆ. ದಿನಾಂಕ:30.03.2013 ರಂದು ಬೆಳಿಗ್ಗೆ 7-00 ಗಂಟೆ ನಾನು ಆತನ ಮನೆಗೆ ಹೋಗಿ ನನ್ನನ್ನು ಮದುವೆ ಮಾಡಿಕೋ ಅಂತಾ ಕೇಳಿದಾಗ ಜಾತಿ ನಿಂದೆನೆ ಮಾಡಿರುತ್ತಾನೆ. ಹಾಗೂ ಆತನ ಹೆಂಡತಿಯಾದ ಭಾಗೀರತಿ ರವರು ಸಹ ಜಾತಿ ನಿಂದನೆ ಮಾಡಿರುತ್ತಾರೆ ಅಂತಾ ಗುಲಬರ್ಗಾ ವಿರೇಶ ನಗರದ 35 ವರ್ಷದ ಯುವತಿ ಖಾಸಗಿ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:25/2013 ಕಲಂ, 376, 420 ಐಪಿಸಿ ಮತ್ತು 3 (1) (10)  (12) (2) (7) ಎಸಸಿ/ಎಸಟಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

26 April 2013

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:ಶ್ರೀ ಅಪ್ಸನಾ ಬೇಗಂ ಗಂಡ ಶೇಖ ಮಹಿಬೂಬ ಸಾ: ಶಹಾಜಿಲಾನಿ ದರ್ಗಾ ಹತ್ತಿರ ಮದಿನಾ ಕಾಲೋನಿ ಎಮ್.ಎಸ್.ಕೆ.ಮಿಲ್ ಗುಲಬರ್ಗಾರವರು ದಿನಾಂಕ:25-04-2013 ರಂದು   ಮಧ್ಯಾಹ್ನ  3=00 ಗಂಟೆ ಸುಮಾರು ನನ್ನ ಮಗಳಾದ ಆಫ್ರೀನಾ ಇವಳು ಓಣಿಯ ಮಕ್ಕಳ ಜೊತೆಗೆ ಹಸನ ಸಾಬ ಕಲೆಗಾರ ಇವರ ಮನೆಯ ಮುಂದೆ ಆಟವಾಡುತ್ತಿದ್ದಾಗ ಶಾಹಾಜಿಲಾನಿ ರೋಡ ಕಡೆಯಿಂದ ಮೋಟಾರ ಸೈಕಲ್ ನಂ:ಕೆಎ-32 ಯು 5177 ನೇದ್ದರ ಸವಾರನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಆಟ ಆಡುತ್ತಿದ್ದ ನನ್ನ ಮಗಳು ಆಫ್ರೀನಾ ಇವಳಿಗೆ ಡಿಕ್ಕಿ ಪಡಿಸಿ ಮೋಟರ ಸೈಕಲ್ ಸಮೇತ   ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:29/2013 ಕಲಂ: 279, 338  ಐ.ಪಿ.ಸಿ. ಸಂ 187 ಐ.ಎಮ್.ವಿ ಆಕ್ಟ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಮಹಾಗಾಂವ  ಪೊಲೀಸ ಠಾಣೆ:ದಿನಾಂಕ:25/04/13 ರಂದು  ಸಾಯಂಕಾಲ 5.30 ಗಂಟೆ ಸುಮಾರಿಗೆ ನಾನು ತಡಕಲ ಕ್ರಾಸದಲ್ಲಿ ನಿಂತಿರುವಾಗ ಸಾಯಂಕಾಲ 6-00 ಗಂಟೆಗೆ ರಟಕಲ ಕಡೆಯಿಂದ ಬಜಾಜ ಡಿಸ್ಕವರಿ ಮೋಟಾರ ಸೈಕಲ ನಂ ಕೆಎ,-32 ಇಸಿ-2622 ನೇದ್ದರ ಚಾಲಕ ಅಪರಿಚಿತ ಗಂಡು ಮನುಷ್ಯ ಅಂದಾಜು 23 ವಯಸ್ಸಿನವನು ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದವನೆ ಮೋಟಾರ ಸೈಕಲದೊಂದಿಗೆ ರೋಡಿನ ತೆಗ್ಗಿನಲ್ಲಿ ಕಲ್ಲುಗಳಲ್ಲಿ ಬಿದ್ದಿದ್ದು ತಲೆಯ ಹಿಂಭಾಗಕ್ಕೆ ಭಾರಿ ರಕ್ತಗಾಯವಾಗಿ ಮೃತಪಟ್ಟಿರುತ್ತಾನೆ. ಸದರಿ ವ್ಯಕ್ತಿಯ ಮೃತನ ಸಂಬಂಧಿಕರ ಬಗ್ಗೆ ಪತ್ತೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ ವೀರಣ್ಣ ತಂ ಶಿವಶರಣಪ್ಪ ಏರಿ ಸಾ|| ತಡಕಲ ಕ್ರಾಸ ತಾ|| ಜಿ||ಗುಲಬರ್ಗಾರವರು ದೂರು ಸಲ್ಲಿಸಿದ  ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 53/2013 ಕಲಂ, 279, 304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಶಹಾಬಾದ ಪೊಲೀಸ್ ಠಾಣೆ:ಶ್ರೀ ಸಂಬಾಜಿ ತಂದೆ ರಾಣಪ್ಪಾ ಸೂಲದವರ ಸಾ:ಐತವಾರ ಫೈಲ ಶಹಾಬಾದರವರು ನನ್ನ ತಮ್ಮನಾದ ರಾಜ ಕಮಲ @ ಗುಂಡು ತಂದೆ ರಾಣಪ್ಪಾ ಇತನು ಮನೆಗೆ ದಿನಾಂಕ:24/04/2013 ರಂದು ರಾತ್ರಿ 9.30 ಪಿಎಂಕ್ಕೆ ಮನೆಯಲ್ಲಿದ್ದ ನನ್ನ ತಾಯಿ ಸೀತಾಬಾಯಿ ಇವಳಿಗೆ ಅವಾಚ್ಯವಾಗಿ ಬೈದು  ಕಪಾಳ ಮೇಲೆ ಕೈಯಿಂದ ಹೊಡೆದನು. ಜಗಳ ಬಿಡಿಸಲು ಹೋದಾಗ ನನಗೂ ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಎತ್ತಿ ನನಗೆ ಕೊಲೆ ಮಾಡುವ ಉದ್ದೇಶದಿಂದ ನನ್ನ ತಲೆಯ ಮೇಲೆ ಹಾಕಲು ಬಂದಾಗ ನಾನು ತಪ್ಪಿಸಿಕೊಂಡಿರುತ್ತೆನೆ.ಹಾಗೂ ನನ್ನ ಹೆಂಡತಿ ಸಂಗಡ ಸಹ ಅಸಸ್ಯವಾಗಿ ನಡೆದುಕೊಂಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:90/2013  ಕಲಂ:341,323,504,354.506,307 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವಿದ್ಯುತ್ ತಂತಿ ತಗಲಿ ಕಾರ್ಮಿಕ ಸಾವು:
ಶಹಾಬಾದ ಪೊಲೀಸ್ ಠಾಣೆ:ದಿನಾಂಕ: 25/04/2013 ರಂದು ನಸುಕಿನ ಜಾವ 5-00 ಗಂಟೆ ಸುಮಾರಿಗೆ ಲಾರಿ ನಂ; ಸಿಎನಕ್ಯೂ ನಂ:6038 ನೇದ್ದರ ಚಾಲಕನಾದ ಖಾದರಸಾಬ ಮುಲ್ಲಾ ತಂದೆ ಮೊಹ್ಮದ ಗೌಸ ಮುಲ್ಲಾ ಹಾಗೂ ಲಾರಿಯ ಮಾಲಿಕನಾದ ಗೊಖುಲ ಕನಸೆ ಹಾಗೂ ನನ್ನ ಕಾಕನಾದ ಯಲ್ಲಪ್ಪಾ ತಂದೆ ಚನ್ನಬಸಪ್ಪಾ ನಿಂಬಾಳ ವಯಾ|| 50 ಸಾ:ಗ್ಯಾಂಗಬೌಡಿ ರವರು ಲಾರಿಯಲ್ಲಿ ಕಿರಾಣಿ ಸಾಮಾನುಗಳು ತುಂಬಿಕೊಂಡು ಶಹಾಬಾದದ ಪೇಮಸ್ ಕಿರಾಣಿ ಅಂಗಡಿಗೆ ತಂದು ಸಾಮಾನುಗಳನ್ನು ಇಳಿಸಬೇಕಾಗಿರುವದರಿಂದ ಕಿರಾಣ ಅಂಗಡಿಯ ಎದುರುಗಡೆ ರೋಡಿನ ಬಲಗಡೆ ಕೆ.ಇ.ಬಿ.ಯ ಹೈ ಪವರ್‌ ತಂತಿ ಇರುವ ಜಾಗದಲ್ಲಿ ಲಾರಿ ಚಾಲಕ ಲಾರಿಯನ್ನು ನಿಲ್ಲಿಸಿದನು. ಲಾರಿಯಲ್ಲಿದ್ದ ಲಾರಿ ಮಾಲಿಕ ಗೊಖುಲ ಇತನು ನನ್ನ ಕಾಕ ಯಲ್ಲಪ್ಪಾ ಇತನಿಗೆ ಲಾರಿಯ ಕ್ಯಾಬಿನ ಮೇಲಿದ್ದ ಕಿರಾಣಿ ಸಾಮಾನುಗಳು ಇಳಿಸು ಅಂತಾ ಹೇಳಿದ್ದರಿಂದ ಕ್ಯಾಬಿನ ಮೇಲೆ ಇದ್ದ ಕಿರಾಣಿ ಸಾಮಾನುಗಳನ್ನು ಬಗ್ಗಿ ತೆಗೆದುಕೊಂಡು ಮೇಲೆ ಏಳುವಷ್ಟರಲ್ಲಿ ಲಾರಿಯ ಮೇಲೆ ಇದ್ದ ಕೆ.ಇ.ಬಿ. ಹೈ ಪವರ್‌‌ ತಂತಿ ನನ್ನ ಕಾಕನ ತಲೆಗೆ ಹತ್ತಿರುವದರಿಂದ ನನ್ನ ಕಾಕನು ಕೆಳಗಡೆ ಬಿದ್ದನು, ನನ್ನ ಕಾಕನ ತಲೆಗೆ ಬಾರಿ ಪೆಟ್ಟಾಗಿ ತಲೆಯಿಂದ ರಕ್ತ ಬರುತ್ತಿದ್ದು, ಮೂಗಿನಿಂದ ರಕ್ತ ಬರುತ್ತಿತ್ತು. ನಾನು ಮತ್ತು ಲಾರಿ ಚಾಲಕ ಹಾಗೂ ಲಾರಿ ಮಾಲಿಕ ಕೂಡಿಕೊಮಡು ಉಪಚಾರ ಕುರಿತು ಆಸ್ಪತ್ರೆಗೆ ತರುವಷ್ಟರಲ್ಲಿ ದಾರಿ ಮಧ್ಯದಲ್ಲಿ ಮೃತ ಪಟ್ಟಿರುತ್ತಾನೆ ಅಂತಾ ಶ್ರೀ,ಅಂಬೋಜಿ ತಂದೆ ತುಳಜಾರಾಮ ನಿಂಬಾಳ ಸಾ:ಮೊರಟಗಿ ತಾ:ಸಿಂದಗಿ ಜಿ:ಬಿಜಾಪುರರವರು ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ: 94/2013 ಕಲಂ, 304 (ಎ) ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

25 April 2013

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಸೇಡಂ ಪೊಲೀಸ ಠಾಣೆ:ಶ್ರೀ,ಸಿದ್ದು ತಂದೆ ರಾಜಶೇಖರ ಪಾಟೀಲ್ ಸಾ:ಹೋಳಿ ಮೈದಾನ ತಾ:ಸೇಡಂ ರವರು ನಾನು ಮನೆಯಲ್ಲಿದ್ದಾಗ ದಿ:24-04-2013 ರಂದು ಬೆಳಗ್ಗೆ 9-30 ಗಂಟೆ ಸುಮಾರಿಗೆ ನಮ್ಮ ತಾತನಾದ ನಾಗಣ್ಣ ತಂದೆ ಸಂಗಪ್ಪ ಪರಗಿ ಇವರು ಲೈಟಿನ ಬಿಲ್ ಕಟ್ಟಲು ಕೆ.ಇ.ಬಿ ಆಫೀಸಗೆ ಹೋದರು ನಾನು ನಮ್ಮ ಕಿರಾಣ ಅಂಗಡಿಗೆ ಹೋಗಿ ಅಂಗಡಿ ತೆರೆಯುತ್ತಿದ್ದಾಗ, ರೇವಣಸಿದ್ದಪ್ಪ ಅನ್ನವವರು ಫೋನ ಮುಖಾಂತರ ನಿಮ್ಮ ತಾತಾ ನಾಗಣ್ಣ ಇವರಿಗೆ ಕೆ.ಇ.ಬಿ ಆಫೀಸ್ ಎದುರುಗಡೆ ಮಹೀಂದ್ರ ಕಂಪನಿಯ ಹೊಸ ಟಂ-ಟಂ ನೇದ್ದರ ಚಾಲಕನು ಡಿಕ್ಕಿ ಪಡಿಸಿದ್ದರಿಂದ ಅವರ ತಲೆಯ ಹಿಂಬಾಗಕ್ಕೆ, ಎಡಗಣ್ಣಿನ ಹುಬ್ಬಿಗೆ ಹಾಗೂ ಮೂಗಿಗೆ ರಕ್ತಗಾಯವಾಗಿದ್ದಲ್ಲದೇ, ಬಲಕಿವಿಯಿಂದ ರಕ್ತ ಬರುತ್ತಿದೆ ಅಂತ ತಿಳಿಸಿದನು. ನಾನು ಹೋಗಿ ನೋಡಲು ನನ್ನ ತಾತನು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ವಾಹನದ ಚಾಲಕನಾದ ಶ್ರೀನಿವಾಸರೆಡ್ಡಿ ತಂದೆ ವೆಂಕಟರೆಡ್ಡಿ ತುಳೇರ ಸಾ|| ಸಣ್ಣಅಗಸಿ ಸೇಡಂ ಇತನು ಉಪಚಾರ ಕುರಿತು ಅದೇ ವಾಹನದಲ್ಲಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾನೆ. ಸಾಯಂಕಾಂಲ 4-00 ಗಂಟೆ ಸುಮಾರಿಗೆ ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ:99/2013 ಕಲಂ-279, 337, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದು, ನಂತರ ಕಲಂ, 304 (ಎ) ಅಳವಡಿಸಿಕೊಂಡಿರುತ್ತಾರೆ.
ದರೋಡೆ ಮಾಡಲು ಪ್ರಯತ್ನ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ: ದಿನಾಂಕ:24-04-2013 ರಂದು ನಸುಕಿನ ಜಾವ 4-30 ಗಂಟೆ ಸುಮಾರಿಗೆ ನಮ್ಮ ಠಾಣಾ ಸರಹದ್ದಿನ ಕೆರೆ ಭೋಸಗಾ ಬಸ್ಸ ಸ್ಟಾಂಡ ಹಿಂದುಗಡೆ ಕೆಲವು ಜನರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು  ಮಾರಕ ಅಸ್ತ್ರಗಳು ಹಿಡಿದುಕೊಂಡು ರೋಡಿಗೆ ಹೋಗಿ ಬರುವ ಜನರಿಗೆ ಮತ್ತು ವಾಹನಗಳಿಗೆ ನಿಲ್ಲಿಸಿ ದರೋಡೆ ಮಾಡಲು ನಿಂತಿರುತ್ತಾರೆ ಅಂತಾ ಮಾಹಿತಿ ಬಂದ ಮೇರೆಗೆ ಮೇಲಾಧಿಕಾರಿಯವರ ಮಾರ್ಗದರ್ಶನದ ಮೇರೆಗೆ ಪಿ.ಎಸ.ಐ ಆನಂದರಾವ ರವರು  ಮತ್ತು ಸಿಬ್ಬಂದಿಯವರು ಹೋಗಿ ದರೋಡೆ ಮಾಡಲು  ಯತ್ನಿಸುತ್ತಿರುವ ಆರೋಪಿಗಳಾದ  1) ಶೇಖ್ಯಾ ತಂದೆ ಹಣಮಂತ ಖೇರತಿ ವಯಾ|| 24 ಸಾ|| ರಾಮತಿರ್ಥ  ಹತ್ತಿರ ಗುಲಬರ್ಗಾ, ಸಂಗಡ 4 ಜನರು  ವಶಕ್ಕೆ ತೆಗೆದುಕೊಂಡು ಠಾಣೆ ಗುನ್ನೆ ನಂ:213/2013 ಕಲಂ,399,402 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ,
ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ: ದಿನಾಂಕ:24-04-2013 ರಂದು ಸಾಯಂಕಾಲ 4-00 ಗಂಟೆ ಸುಮಾರಿಗೆ ಹೀರಾಪೂರ ಸೀಮೆಯಲ್ಲಿ  ಬರುವ ಬಾಬುಮಿಯ್ಯಾ ತೋಟದ ಹೊಲದಲ್ಲಿ ಸಮೀಪ ಕೆಲವು ಜನರು ಇಸ್ಪೀಟ ಜೂಜಾಟ  ಆಡುತ್ತಿದ್ದಾರೆ  ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ.ಐ ರವರಾದ ಆನಂದರಾವ ರವರು ಮತ್ತು ಅವರು ಸಿಬ್ಬಂದಿಯವರು ದಾಳಿ ಮಾಡಿ ನವಾಬ ಅಲಿ ತಂದೆ ಅಮೀರ ಅಲಿ ವ:38 ವರ್ಷ ಉ: ಚಹಾ ಪತ್ತಿ ವ್ಯಾಪರ ಸಾ: ಎಂ.ಎಸ್.ಕೆ.ಮಿಲ್ಲ ಜಿಲಾನಾಬಾದ ಗುಲಬರ್ಗಾ  2) ಕಲ್ಯಾಣರಾವ ತಂದೆ ದೇವಿಂದ್ರಪ್ಪ ಹೀರಾಪೂರ ವ:53 ವರ್ಷ ಉ: ವಾಚಮ್ಯಾನ ಕೆಲಸ  ಸಾ: ಹೀರಾಪೂರ ಗ್ರಾಮ   3) ಸಾಬೀರ ಹುಸೇನ ತಂದೆ ಮಹೆಬೂಬಸಾಬ ವ:35 ವರ್ಷ ಉ: ಸೆಂಟ್ರಿಂಗ ಕೆಲಸ  ಸಾ: ಎಂ.ಎಸ್.ಕೆ.ಮಿಲ್ಲ ಗುಲಬರ್ಗಾ  4) ನಿಜಾಮೋದ್ದಿನ ತಂದೆ ನಸಿರೋದ್ದಿನ ವ:45 ವರ್ಷ ಉ:ಲಾರಿ ಮೆಕ್ಯಾನಿಕ ಸಾ:ಬಿಲಾಲಬಾದ ಗುಲಬರ್ಗಾ  5) ಮಹ್ಮದ ಖಾಜಾ ತಂದೆ ಇಸ್ಮಾಯಿಲ್  ಮೈದರಗಿ ವ:23 ವರ್ಷ ಉ: ಆಟೋ ಚಾಲಕ ಸಾ: ಹೀರಾಪೂರ ಗುಲಬರ್ಗಾ ರವರನ್ನು ದಸ್ತಗಿರಿ ಮಾಡಿ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 4,580/- ರೂಪಾಯಿಗಳು ಹಾಗೂ ಜೂಜಾಟದ ಎಲೆಗಳು ಜಪ್ತಿ ಪಡಿಸಿಕೊಂಡ ಮೇರೆಗೆ ಠಾಣೆ ಗುನ್ನೆ ನಂ:214/2013 ಕಲಂ, 87 ಕ.ಪಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ, 

24 April 2013

GULBARGA DISTRICT REPORTED CRIMES


ಮಂಗಳಸೂತ್ರ ದರೋಡೆ ಮಾಡಿದ ಬಗ್ಗೆ: :
ಅಶೋಕ ನಗರ ಪೊಲೀಸ್ ಠಾಣೆ:ಶ್ರೀಮತಿ ಪ್ರತಿಭಾ ಗಂಡ ಅಶೋಕ ತಾಳಿಕೋಟಿ ಸಾ|| ಎಸ್.ಬಿ.ಎಚ್ ಕಾಲೋನಿ ಗೋದುತಾಯಿ ನಗರ ಗುಲಬರ್ಗಾರವರು ನಾನು ಮತ್ತು ನನ್ನ ಅತ್ತೆ ಹಾಗೂ ದೊಡ್ಡ ಅತ್ತೆ ಶಾಂತಿಬಾಯಿ ಯಾದಗಿರಿ ಮೂರು ಜನರು ದಿನಾಂಕ:23/04/2013 ರಂದು  ನಮ್ಮ ಸಂಬಂಧಿಕರ ಮಗುವಿನ ತೊಟ್ಟಿಲ್  ಕಾರ್ಯಕ್ರಮ ಮುಗಿಸಿಕೊಂಡು ಗಂಜದಿಂದ ನೃಪತುಂಗ ನಗರ ಸಾರಿಗೆ ಬಸ್ಸಿನಲ್ಲಿ ಕುಳಿತು ಕೊಠಾರಿ ಭವನ ಹತ್ತಿರ ಇಳಿದು ನಡೆದುಕೊಂಡು ಮದರ ತೆರಿಸಾ ಶಾಲೆಯ ಕ್ರಾಸಿನ ಹತ್ತಿರ ಹೋಗುತ್ತಿರುವಾಗ ಸಾಯಂಕಾಲ 4-30 ಗಂಟೆ ಸುಮಾರಿಗೆ ಎದುರುಗಡೆಯಿಂದ ಒಂದು ಕಪ್ಪು ಬಣ್ಣದ ಮೋಟಾರ ಸೈಕಲ್ ಮೇಲೆ ಇಬ್ಬರೂ ಸವಾರರು ಕುಳಿತುಕೊಂಡು ಬಂದವರೇ ಒಮ್ಮೇಲೆ ನನ್ನ ಮೈಮೇಲೆ ಬಂದು ಮೋಟಾರ ಸೈಕಲ್ ಹಿಂದೆ ಕುಳಿತ ವ್ಯಕ್ತಿಯು ನನ್ನ ಕೊರಳಿಗೆ ಕೈಹಾಕಿ ಬಂಗಾರದ ಮಂಗಳಸೂತ್ರ ಸರ್ ಕಿತ್ತುಕೊಂಡು ಹೋಗಿದ್ದು ಕಿತ್ತುಕೊಳ್ಳುವಾಗ ನಾನು ಮಂಗಳಸೂತ್ರ ಪದಕ ಹಿಡಿದಿದ್ದಕ್ಕೆ 1 ತೊಲೆ ಪದಕ ಮಾತ್ರ ಕೈಯಲ್ಲಿ ಉಳಿದಿದ್ದು ಇನ್ನೋಳಿದ 3 ತೊಲೆಯ ಬಂಗಾರದ ಮಂಗಳಸೂತ್ರ ಸರ್ ಕಿತ್ತುಕೊಂಡು ಓಡಿ ಹೋಗಿರುತ್ತಾರೆ. ಅದರ ಮೌಲ್ಯ 75,000/- ರೂಪಾಯಿಗಳಾಗುತ್ತದೆ. ಮಂಗಳಸೂತ್ರ ಕಿತ್ತುಕೊಂಡು ಹೋಗಿದ್ದ ಹಿಂದೆ ಕುಳಿತ ವ್ಯಕ್ತಿಯು ಬ್ಲೂ ಜಿನ್ಸ ಪ್ಯಾಂಟ, ಎಲ್ಲೋ ಚಕ್ಸ ಟಿ-ಶರ್ಟ ಮತ್ತು ಕಣ್ಣಿಗೆ ಚಸ್ಮಾ, ಕ್ಯಾಪ್ ಹಾಕಿಕೊಂಡಿದ್ದು ಆತನಿಗೆ ನೋಡಿದರೆ ಗುರುತಿಸುತ್ತೆನೆ. ಅಂತಾ ಶ್ರೀಮತಿ, ಪ್ರತಿಭಾ ಗಂಡ ಅಶೋಕ ರವರು ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ:70/2013  ಕಲಂ.392 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ನೆಲೋಗಿ ಪೊಲೀಸ ಠಾಣೆ: ದಿನಾಂಕ:20/04/2013 ರಂದು ರಾತ್ರಿ  9.00 ಗಂಟೆಯ ಸುಮಾರಿಗೆ ನಾನು ಹಾಗೂ ಗಂಡ ಮನೆಯಲ್ಲಿ ಮಾತನಾಡುತ್ತ  ಕುಳಿತಿದ್ದಾಗ ನಮ್ಮ ಅಣ್ಣ ತಮ್ಮಕೀಯ ಮಲ್ಲಣ್ಣ ತಂದೆ ರುದ್ರಗೌಡ ಹಾಗೂ ಬಸಲಿಂಗಪ್ಪ ತಂದೆ ರುದ್ರಗೌಡ ಬಂದು ಮನೆಯ ಭಾಗಿಲ ಬಡೆದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ನಿನ್ನ ಗಂಡ ಎಲ್ಲಿದ್ದಾನೆ ಅಂತಾ ಮಲ್ಲಪ್ಪ ಮತ್ತು ಬಸಲಿಂಗಪ್ಪನು ಕೇಳಿ ಜಗಳ ಬಿಡಿಸಲು ಬಂದ  ನನ್ನ ಗಂಡನ ಬೆನ್ನಿಗೆ ಮತ್ತು ಕೈಗೆ ಬಡಿಗೆಯಿಂದ ಹೋಡೆದಿರುತ್ತಾರೆ ಅಂತಾ ಶ್ರೀಮತಿ  ಲಲೀತಾಬಾಯಿ ಗಂಡ ಶಿವಶರಣಪ್ಪ ಪೊಲೀಸ್ ಪಾಟೀಲ್ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನ ನಂ:63/2013 ಕಲಂ 448,323,324,354,504.506 ಸಂ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ:ಶ್ರೀ, ಬಾಷಾ ತಂದೆ ಮಕ್ಸೂದ @ ಮಲಿಕ್ ಮುಜಾವರ ಸಾ; ನೆಲ್ಲೂರ ತಾ:ಆಳಂದ ಜಿ;ಗುಲಬರ್ಗಾ ರವರು ದಿನಾಂಕ:22-04-2013 ರಂದು ರಾತ್ರಿ 10-45 ಗಂಟೆಯ ಸುಮಾರಿಗೆ ಗುಲಬರ್ಗಾ – ಆಳಂದ ರಸ್ತೆಯ ಜವಳಿ ದಾಬಾದ ಎದುರುಗಡೆ  ನಾನು ಮತ್ತು ನನ್ನ ತಂಗಿಯ ಗಂಡ ಜಾವೇದ ಇಬ್ಬರು ಕೂಡಿಕೊಂಡು ನಮ್ಮ ಬಜಾಜ ಪಲ್ಸರ್  ಮೋಟಾರ ಸೈಕಲ್ ನಂ.ಕೆಎ.32 ಡಬ್ಲೂ.7225 ನೇದ್ದರ ಮೇಲೆ ನೆಲ್ಲೂರದಿಂದ ಪಟ್ಟಣ ಗ್ರಾಮಕ್ಕೆ ಬರುತ್ತಿರುವಾಗ  ನಮ್ಮ ಹಿಂದಿನಿಂದ ಕಾರ ನಂ.ಎಂ.ಹೆಚ-03 ಎಎಫ್. 4060 ನೇದ್ದರ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿ ನಮ್ಮ ಮೋಟಾರ ಸೈಕಲಕ್ಕೆ ಡಿಕ್ಕಿ ಹೋಡೆದು ಕಾರ ಅಲ್ಲಿಯೇ ನಿಲ್ಲಿಸಿ ಓಡಿಹೋದನು. ನನಗೆ ತಲೆಗೆ, ಬಲಕಪಾಳಕ್ಕೆ ಭಾರಿ ರಕ್ತಗಾಯ ಮತ್ತು ತರಚಿದ ಗಾಯಗಳಾಗಿದ್ದು  ಮತ್ತು ಮೋಟಾರ ಸೈಕಲ್ ನಡೆಯಿಸುತಿದ್ದ ಜಾವೇದ ತಂದೆ ಬಕ್ಸೊದ್ದಿನ  ಇತನಿಗೆ  ತಲೆಯ ಹಿಂದುಗಡೆ ಭಾರಿ ರಕ್ತಗಾಯವಾಗಿ,ಕಿವಿಯಿಂದ, ಮೂಗಿನಿಂದ, ಬಾಯಿಂದ ರಕ್ತಸ್ರಾವವಾಗುತ್ತಿತ್ತು. 108 ಅಂಬುಲೆನ್ಸದಲ್ಲಿ ಉಪಚಾರ ಕುರಿತು ಗುಲಬರ್ಗಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಲಾಗಿದ್ದು, ಹೆಚ್ಚಿನ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದಾಗ ಜಾವೇದ ಇತನು ಉಪಚಾಕ ಫಲಕಾರಿಯಾಗದೇ ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ:210/2013 ಕಲಂ.279,338, 304 (ಎ) ಐಪಿಸಿ ಸಂಗಡ 187 ಐಎಂವಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. ನಂತರ 

23 April 2013

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:ದಿನಾಂಕ. 22-04-2013 ರಂದು ಮಧ್ಯಾಹ್ನ 1-00 ಗಂಟೆಯ ಸುಮಾರಿಗೆ ಗುಲಬರ್ಗಾ – ಆಳಂದ ರಸ್ತೆಯ ಕೆರಿಬೋಸಗಾ ಕ್ರಾಸ ಹತ್ತಿರ  ಆಟೋರಿಕ್ಷಾ ನಂ.ಕೆಎ.32 ಬಿ-6843 ನೇದ್ದರಲ್ಲಿ  ಮಹಾಂತೇಶ ತಂದೆ ಭೀಮರಾಯ ಪೂಜಾರಿ ವಯಾ||14 ವರ್ಷ , 2) ನವನೀತ ತಂದೆ ಅಂಬರಾಯ ಪೂಜಾರಿ ವಯಾ||6 ವರ್ಷ ಇವರನ್ನು ಚಾಲಕನಾದ ಬಸವರಾಜ ತಂದೆ ಪರಮೇಶ್ವರ ನಾಟೀಕಾರ ಇತನು ಭೀಮಳ್ಳಿ ಗ್ರಾಮದಿಂದ ಕೆರಿಬೋಸಗಾಕ್ಕೆ ಕರೆದುಕೊಂಡು ಬರುತ್ತಿದ್ದು,  ಆಟೋರಿಕ್ಷಾ ಚಾಲಕ ಅತೀವೇಗವಾಗಿ ಚಲಾಯಿಸುತ್ತಿರುವಾಗ ಗುಲಬರ್ಗಾ ಕಡೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್ಸ ನಂ.ಕೆ.ಎ.32 ಎಫ್. 1661 ನೇದ್ದರ ಚಾಲಕನು ಸಹ ಅತೀವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿದ್ದರಿಂದ ಎರಡು ವಾಹನಗಳು ಮುಖಾಮುಖಿಯಾಗಿ ಡಿಕ್ಕಿಯಾಗಿದ್ದರಿಂದ ಆಟೋ ರಿಕ್ಷಾದಲ್ಲಿ ಕುಳಿತಿದ್ದ ಭೀಮರಾಯ ಪೂಜಾರಿ ಮತ್ತು 2) ನವನೀತ ತಂದೆ ಅಂಬರಾಯ ಪೂಜಾರಿ ಇವರುಗಳಿಗೆ ತಲೆಗೆ ,ಹಣೆಗೆ, ಭಾರಿಗಾಯವಾಗಿ ಸ್ಥಳದಲ್ಲಿ ಮೃತ ಪಟ್ಟಿರುತ್ತಾರೆ.  ಆಟೋ ಚಾಲಕ ಬಸವರಾಜ ನಾಟೀಕಾರ ಇತನಿಗೆ ಭಾರಿ ಗುಪ್ತಗಾಯಗಳಾಗಿದ್ದು, ಬಸ್ಸ ಚಾಲಕ ಓಡಿಹೋಗಿರುತ್ತಾನೆ ಅಂತಾ ಶ್ರೀ ಅಂಬರಾಯ ತಂದೆ ಶಿವರಾಯ ಪೂಜಾರಿ ಉ;ಆಟೋ ಚಾಲಕ ಸಾ;ಕೆರಿಬೋಸಗಾ ತಾ;ಜಿ;ಗುಲಬರ್ಗಾರವರು ದೂರು ಸಲ್ಲಿಸಿದ್ದರಿಂದ  ಠಾಣೆ ಗುನ್ನೆ ನಂ:208/2013 ಕಲಂ.279,338,304 (ಎ) ಐಪಿಸಿ. ಸಂಗಡ 187 ಐಎಂವಿ ಆಕ್ಟ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ:ಶ್ರೀ ಅನೀಲ ತಂದೆ ವಿಠಲ ಶಹಾಬಾದ   ಸಾ|| ಕುಮಸಿ ತಾ ||ಗುಲಬರ್ಗಾರವರು ನಾನು ದಿನಾಂಕ:22-04-2013 ರಂದು ಮಧ್ಯಾಹ್ನ 2.30 ಗಂಟೆ ಸುಮಾರಿಗೆ ಲಕ್ಷ್ಮಿನಿವಾಸ ಕಾಂಪ್ಲೆಕ್ಸ ಎದುರುಗಡೆ ರೋಡಿನ ಮೇಲೆ ಹೊರಟಾಗ ಲಾರಿ ನಂಬರ ಕೆಎ-32 ಎ-5943 ನೇದ್ದರ ಚಾಲಕನು ತನ್ನ ಲಾರಿಯನ್ನು ಗಂಜ ಬಸ್ ನಿಲ್ದಾಣ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿ ಮುಂದೆ ಮೋಟಾರ ಸೈಕಲ ನಂಬರ ಕೆಎ-36 ಎಸ್-7090 ನೇದ್ದಕ್ಕೆ ಡಿಕ್ಕಿ ಪಡಿಸಿದ್ದರಿಂದ ಸುರೇಶ ತಂದೆ ಶರಣಪ್ಪಾ ಜಮಗಾ ಸಾ||ಕುಮಸಿ ಇವರಿಗೆ ಭಾರಿಗಾಯಗಳಾಗಿರುತ್ತವೆ. ಲಾರಿ ಚಾಲಕ ತನ್ನ ಲಾರಿಯನ್ನು  ಅಲ್ಲಿಯೆ ಬಿಟ್ಟು ಓಡಿಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 23/2013 ಕಲಂ, 279, 338 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ:
ರೋಜಾ ಪೊಲೀಸ್ ಠಾಣೆ:ದಿನಾಂಕ: 22/04/2013 ರಂದು ರಾತ್ರಿ 10-25 ಗಂಟೆ ಸುಮಾರಿಗೆ  ರೋಜಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಪಾಯನಗಲ್ಲಿಗೆ ಬಂದಾಗ ಕಬಲಾ ಬಾಷಾ ದರ್ಗಾ ಹಾಗೂ ಮುನಾವರ ಹುಸೇನ ಇವರ ಮನೆಯ ಹತ್ತಿರದಲ್ಲಿ ಸಾರ್ವಜನಿಕ ರಸ್ತೆಯ ಮೇಲೆ ಕೆ.ಜೆ.ಪಿ ಪಕ್ಷದ  ಅಭ್ಯರ್ಥಿಯಾದ ಶ್ರೀ ಉಸ್ತಾದ ನಾಸೀರ ಹುಸೇನ ರವರು ಯಾವದೇ ಪರವಾನಿಗೆ ಪಡೆಯದೆ, ಕಬಲಾ ಬಾಷಾ ದರ್ಗಾ ಹಾಗೂ ಮುನಾವರ ಹುಸೇನ ಇವರ ಮನೆಯ ಹತ್ತಿರದ ಸಾರ್ವಜನಿಕ ರಸ್ತೆಯ ಮೇಲೆ ಚುನಾವಣೆ ಪ್ರಚಾರದ ಸಮಯ ಮುಗಿದ ಮೇಲೆ ಸಹ ಸಭೆಯನ್ನು ನಡೆಸಿದ್ದರಿಂದ ಅವರು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿರುತ್ತಾರೆ ಅಂತಾ ಅನೀಲಕುಮಾರ ಪ್ಲಾಯಿಂಗ್ ಸ್ವ್ಕಾಡ ಆಪೀಸರ್  ಗುಲಬರ್ಗಾ ರವರು ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ: 30/2013 ಕಲಂ, 171, (ಹೆಚ) 1951 ಆರ.ಪಿ.ಆಕ್ಟ ಮತ್ತು 188 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. 

22 April 2013

GULBARGA DISTRICT REPORTED CRIME


ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ಶ್ರೀ ಬಸವರಾಜ ತಂದೆ ಸಿದ್ದಣ್ಣ ಮೈಲಾರ ಸಾ|| ವಾಸವದತ್ತ ಕಾಲೋನಿ ಸೇಡಂ ರವರು ನಾನು ಮತ್ತು ನನ್ನ ಧರ್ಮಪತ್ನಿ ಸುವರ್ಣ ಇಬ್ಬರು ದಿನಾಂಕ:21/04/2013 ರಂದು ರಾತ್ರಿ 8-00 ಗಂಟೆಗೆ ಗುಲಬರ್ಗಾ ಕೇಂದ್ರ ಬಸ್ ನಿಲ್ದಾಣದಲ್ಲಿ ಬಂದು ಬೆಂಗಳೂರಿಗೆ ಹೋಗುವ ಕುರಿತು ರಾಜಹಂಸ ಬಸ್ ನಂಬರ ಕೆಎ-32 ಎಫ್-1798 ನೇದ್ದರಲ್ಲಿ ಶೀಟ್ ನಂ. 25,26 ರ ಮೇಲೆ ಡೆಲ್ ಲ್ಯಾಪಟ್ಯಾಪ Sl No.BXYMMV1 ಮತ್ತು ಲ್ಯಾಪಟ್ಯಾಪ ಬ್ಯಾಗಿನಲ್ಲಿದ್ದ ಟಾಟಾ ಡೊಕೊಮೊ ಪುಟೊನ್ ಡಾಟಾ ಕಾರ್ಡ,ಚೆಕ್ ಬುಕ್, ಮನೆಯ ಮತ್ತು ಕಾರಿನ ಕಿಲಿಕೈಗಳು ಒಟ್ಟು ಅ.ಕಿ 45,000/- ಬೆಲೆಬಾಳುವುಗಳು ಶೀಟಿನ ಮೇಲೆ ಕ್ಯಾರಿಯರದಲ್ಲಿಟ್ಟಿದ್ದು, ನಾವು ಕುಳಿತಿರುವ ಬಸ್ಸು ರೈಲ್ವೆ ಗೇಟ ಹತ್ತಿರ ಹೋದಾಗ ಲಗೇಜ ಬ್ಯಾಗ ನೋಡಲು ನನ್ನ ಲ್ಯಾಪಟ್ಯಾಪ ಬ್ಯಾಗ ಕಾಣಿಸಲಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 68/2013 ಕಲಂ 379 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

21 April 2013

GULBARGA DISTRICT REPORTED CRIMES


ವರದಕ್ಷಿಣೆ ಕಿರುಕುಳ ಪ್ರಕರಣ:
ಮಹಿಳಾ ಪೋಲಿಸ ಠಾಣೆ: ದಿನಾಂಕ: 11.06.2011 ರಂದು 5 ಲಕ್ಷ ರೂಪಾಯಿಗಳು, 11 ತೋಲೆ ಬಂಗಾರ ಮತ್ತು ಸಾಮಾನುಗಳನ್ನು ವರದಕ್ಷಿಣೆ ರೂಪದಲ್ಲಿ ಕೊಟ್ಟು ಮದುವೆಯು ಅಶ್ಪಾಕ ಹುಸೇನನೊಂದಿಗೆ ರಂದು ಮದುವೆ ಮಾಡಿಕೊಟ್ಟಿದ್ದು, ಮದುವೆಯಾದ 6 ತಿಂಗಳವರೆಗೆ ನನ್ನ ಗಂಡ ನನ್ನೊಂದಿಗೆ ಚೆನ್ನಾಗಿದ್ದು, ನಂತರ ತವರು ಮನೆಯಿಂದ ಟಿ.ವಿ ಫ್ರೀಜ್ ಹಣ ಪ್ಲಾಟ ತೆಗೆದುಕೊಂಡು ಬಾ ಅಂತಾ ಮಾನಸಿಕ ದೈಹಿಕ ಹಿಂಸೆ ಕೊಡುತ್ತಾ ಬಂದಿರುತ್ತಾನೆ.  ಹಾಗೂ ಅವರ ಮನೆಯವರು ಸಹ ಮಾನಸಿಕ ಹಿಂಸೆ ಕೊಡುತ್ತಾ ಬಂದಿರುತ್ತಾರೆ. ದಿನಾಂಕ:28.04.2002 ರಂದು ತನ್ನ ತವರು ಮನೆಗೆ ಬಂದು ಹೆಣ್ಣು ಮಗುವಿಗೆ ಜನ್ಮ ನೀಡಿರುತ್ತೆನೆ. ಆ ಮಗುವಿಗೆ ನೋಡಲು ಸಹ ಅಶಫಾಕ ಹುಸೇನ ಬಂದಿರುವುದಿಲ್ಲಾ. 2003 ರಲ್ಲಿ ಜಾಮಾ ಮಜೀದ ವಾಡಿ ಕಮೀಟಿ ಹತ್ತಿರ ಹೋಗಿ ಪಂಚಾಯಿತಿ ಮಾಡಿಸಿ ನನ್ನ ಗಂಡನಿಗೆ ಸರಿಯಾಗಿ ಇರಲು ತಿಳುವಳಿಕೆ ಹೇಳಲಾಗಿತ್ತು. ಆದರೂ ಸಹ ನನಗೆ ಸರಿಯಾಗಿ ನೋಡಿಕೊಳ್ಳದೇ ತವರು ಮನೆಯಿಂದ ಹಣ ಮತ್ತು ಬಂಗಾರ ತಗೆದುಕೊಂಡು ಬರುವಂತೆ ಆತನು ಮತ್ತು ಆತನ ಮನೆಯವರು ಹೊಡೆ ಬಡೆ ಮಾಡಿರುತ್ತಾರೆ ಅಂತಾ ಶ್ರೀಮತಿ ಫರಜಾನಾ  ಬೇಗಂ ಗಂಡ ಅಶಫಾಕ ಹುಸೇನ ಸಾ:ಏಶೀಯನ್ ರೇಸಿಡೇಸ್ಸಿ ಎದುರುಗಡೆ  ಜಿ.ಡಿ.ಎ ಆಫೀಸ  ಗುಲಬರ್ಗಾರವರು ಮಾನ್ಯ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರಿಂದ ಮಾನ್ಯ ನ್ಯಾಯಾಲಯದ ಆದೇಶದಂತೆ ಠಾಣೆ ಗುನ್ನೆ ನಂ:23/2013 ಕಲಂ 498(ಎ).323.504.506 ಸಂಗಡ 149 ಐ.ಪಿ.ಸಿ ಮತ್ತು 3&4 ಡಿ.ಪಿ.ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವರದಕ್ಷಿಣೆ ಕಿರುಕುಳ ಪ್ರಕರಣ:
ಮಹಿಳಾ ಪೋಲಿಸ ಠಾಣೆ: ಶ್ರೀಮತಿ, ಸುಮಯ್ಯಾ ಅಪ್ರೀನ ಗಂಡ ಸೈಯ್ಯದ ಅಲಿಮ ಸಾ:ನೂರಬಾಗ ಎರಿಯಾ ಗುಲಬರ್ಗಾ ರವರು ನನ್ನ ಮದುವೆ  ಸೈಯ್ಯದ ಅಲಿಮ ಇತನ್ನೊಂದಿಗೆ ದಿನಾಂಕ:11-2-2010 ರಂದು ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು ಮದುವೆಯ ಕಾಲಕ್ಕೆ 21 ಸಾವಿರ ರೂಪಾಯಿಗಳು, 4 ತೊಲೆ ಬಂಗಾರ ಮತ್ತು ಗೃಹಬಳಕೆಯ ಸಾಮಾನುಗಳು ಕೊಟ್ಟು  ಮದುವೆ ಮಾಡಿರುತ್ತಾರೆ. ನನ್ನ ಗಂಡನು ನಿನ್ನ ತವರು ಮನೆಯಿಂದ 2 ಲಕ್ಷ ತೆಗೆದುಕೊಂಡು ಬರಬೇಕು ಅಂತಾ ದಿನಾಲು ಜಗಳ ತೆಗೆದು  ಕೈಯಿಂದ ಹೊಡೆಬಡೆ ಮಾಡುತ್ತಿದ್ದನು. ನನ್ನ ಅತ್ತೆ ಖೂತೆಜಾಬಿ ಮೈದುನ ಜಾವೀದ ಕೂಡಾ ನಿನ್ನ ತವರು ಮನೆಯಿಂದ 2 ಲಕ್ಷ ರೂಪಾಯಿಗಳು  ತರದೆ ಇದ್ದರೆ, ನನ್ನ ಗಂಡನಿಗೆ ಮತ್ತೊಂದು ಮದುವೆ ಮಾಡುವುದಾಗಿ ಹೇಳಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ಕೊಡುತ್ತಿದ್ದರು. ದಿನಾಂಕ:02-06-2012 ರಂದು 10-00 ಗಂಟೆಯ ಸುಮಾರಿಗೆ ನನ್ನ ಗಂಡ ಕೆಲಸ ಮುಗಿಸಿಕೊಂಡು ಬಂದವನೇ ಹೊಡೆ ಬಡೆ ಮಾಡಿರುತ್ತಾನೆ. ನನ್ನ ಅತ್ತೆ ಖೂತೆಜಾಬಿ ಮೈದುನ ಜಾವೀದ ಇವರು ಸಹ ಅಂತಾ ಅವಾಚ್ಯ ಶಬ್ದಗಳಿಂದ ಬೈದ್ದು ಕೈಯಿಂದ ಹೊಡೆಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:24/2013 ಕಲಂ 498(ಎ).323.504.506 ಸಂಗಡ 34 ಐ.ಪಿ.ಸಿ ಮತ್ತು 3&4 ಡಿ.ಪಿ.ಎಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:ದಿನಾಂಕ 20-04-2013 ರಂದು ಸಾಯಂಕಾಲ 7-00 ಗಂಟೆಗೆ ಮಲ್ಲಿಕಾರ್ಜುನ ಇತನು ಚಲಾಯಿಸುತ್ತಿರುವ ಮೋಟಾರ ಸೈಕಲ ನಂಬರ ಕೆಎ-32 ವಾಯ-4709 ನೇದ್ದರ ಮೇಲೆ ಶರಣಬಸವೇಶ್ವರ ದೇವಸ್ಥಾನದಿಂದ ಗೋವಾ ಹೋಟೆಲ ಮುಖಾಂತರ ಮನೆಯ ಕಡೆಗೆ ಬರುತ್ತಿರುವಾಗ ಕಲ್ಯಾಣಿ ಪೆಟ್ರೋಲ ಪಂಪ ಹತ್ತಿರ ಜಗತ ಸರ್ಕಲ ಕಡೆಯಿಂದ ಅಟೋರಿಕ್ಷಾ ನಂಬರ ಕೆಎ-32 ಎ-8576 ರ ಚಾಲಕ ರಾಜು ಇತನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಪಡಿಸಿರುತ್ತಾನೆ ಅಂತಾ ಶ್ರೀ ವಿಜಯಕುಮಾರ ತಂದೆ ಪ್ರಭುಗೌಡ   ಸಾ:ಮನೆ ನಂ 45(ಎ) ಡಿಎಆರ ಹೆಡ  ಕ್ವಾಟರ್ಸ ಗುಲಬರ್ಗಾರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 28/2013  ಕಲಂ: 279,337  ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

20 April 2013

GULBARGA DISTRICT


:: ವಿಧಾನ ಸಭಾ ಚುನಾವಣೆ ನಿಮಿತ್ಯ ಪೊಲೀಸ ವೀಕ್ಷಕರ ನೇಮಕ ::
ದಿನಾಂಕ:05-04-2013 ರಂದು ನಡೆಯಲಿರುವ ರಾಜ್ಯ ವಿಧಾನ ಸಭಾ ಚುನಾವಣೆ ನಿಮಿತ್ಯ ಮಾನ್ಯ ಕೇಂದ್ರ ಮುಖ್ಯ ಚುನಾವಣೆ ಆಯುಕ್ತರು ಹೊಸ ದೆಹಲಿರವರು ಗುಲಬರ್ಗಾ ಜಿಲ್ಲೆಗೆ   ಶ್ರೀ ಆರ.ಸಿ. ಪಟೇಲ್ ಐ.ಪಿ.ಎಸ್., ಪೊಲೀಸ್ ಮಹಾ ನಿರೀಕ್ಷಕರವರಿಗೆ ವಿಧಾನ ಸಭಾ ಚುನಾವಣೆ ಪೊಲೀಸ್ ವೀಕ್ಷಕರಾಗಿ ನೇಮಕ ಮಾಡಿರುತ್ತಾರೆ. ಆದ್ದರಿಂದ ವಿಧಾನ ಸಭಾ ಚುನಾವಣೆ ಆಕ್ರಮಗಳ ಬಗ್ಗೆ ದೂರುಗಳಿದ್ದಲ್ಲಿ ಪೊಲೀಸ್ ತರಬೇತಿ ಕಾಲೇಜು ಅತೀಥಿ ಗೃಹ ನಾಗನಹಳ್ಳಿಯ ಕಛೇರಿಯಲ್ಲಿ ಮಧ್ಯಾಹ್ನ  3-00 ಗಂಟೆಯಿಂದ ಸಾಯಂಕಾಲ 4-00 ಗಂಟೆಯವರೆಗೆ ಖುದ್ದಾಗಿ ಬೇಟ್ಟಿಯಾಗಬಹುದು. ಅಥವಾ ಮಾನ್ಯರ ಮೋಬಾಯಿಲ್ ಸಂಖ್ಯೆ:9448889914 ನೇದ್ದಕ್ಕೆ ದೂರವಾಣಿ ಕರೆ ಮಾಡಿ ತಮ್ಮ ದೂರುಗಳನ್ನು ಸಲ್ಲಿಸಬಹುದು.                                                                             

19 April 2013

GULBARGA DISTRICT REPORTED CRIMES


ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ : ದಿನಾಂಕ:19-03-2013 ರಂದು ಬೆಳಿಗ್ಗೆ 9-30 ಗಂಟೆ ಸುಮಾರಿಗೆ ಗುಲಬರ್ಗಾ ಗ್ರಾಮೀಣ ಮತಕೇತ್ರದ ವ್ಯಾಪ್ತಿಯಲ್ಲಿ ಬರುವ ಕಮಲಾಪೂರ ಗ್ರಾಮದಲ್ಲಿ ಕೆ.ಜೆ.ಪಿ ಪಕ್ಷದ ಟೆಂಗನಿಕಾಯಿ ಚಿಹ್ನೆ ಮತ್ತು ಆ ಪಕ್ಷದ ಮುಖಂಡರ ಭಾವವಿತ್ರವಿರುವ ಬಿತ್ತಿ ಪತ್ರಗಳು ಬಸವೇಶ್ವರ ಕಟ್ಟೆಯ ಸಮೀಪ ಲೈಟ ಕಂಬದ ಮೇಲೆ ಯಾವದೇ ಪರವಾನಿಗೆ ಪಡೆಯದೆ ಕೆ.ಜೆ.ಪಿ ಪಕ್ಷದ ಅಧಿಕೃತ ಅಭ್ಯರ್ತಿಯವರು ಅಂಟಿಸಿರುತ್ತಾರೆ. ಹಾಗೂ ಪ್ರೀಂಟಗಳು ಹಾಗೂ  ತಯಾರಕರ ಹೆಸರು ನಮೂದಿಸಿರುವದಿಲ್ಲ  ಅಂತಾ ಶ್ರೀ, ನಾಗೇಂದ್ರ ಬಿರಾದಾರ ಗ್ರಾಮೀಣ ಮತಕ್ಷೇತ್ರದ ಚುನಾವಣೆ ಜಾಗೃತ ಅಧಿಕಾರಿಗಳು ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ: 38/2013  ಕಲಂ,3 Karnataka open places prevention disfigurement act ಮತ್ತು 188 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ :ದಿನಾಂಕ:19-04-2013 ರಂದು 12-30 ಗಂಟೆ ಸಮಯದಲ್ಲಿಗುಲಬರ್ಗಾ ಗ್ರಾಮೀಣ ಮತ ಕ್ಷೇತ್ರದ ಕಮಲಾಪೂರ ಗ್ರಾಮದಲ್ಲಿ ಪರಿವೀಕ್ಷಣೆಮಾಡುತ್ತಿರುವಾಗ ಕಮಲಾಪೂರ ಗ್ರಾಮದ ಸೇತುವೆ ಹತ್ತಿರ ಇರುವ ಗುಂಡಪ್ಪಾ ಮೂಲಿಮನಿ ಇವರ ಅಂಗಡಿಯ ಮೇಲೆ ಬಿ.ಎಸ್.ಆರ್ ಪಕ್ಷದ ಚಿಹ್ನೆ ಪತ್ರ ಶ್ರೀರಾಮಲು ಹಾಗೂ ಈ ಕ್ಷೇತ್ರದ ಬಿ.ಎಸ್.ಆರ್ ಪಕ್ಷದ ಅಬ್ಯರ್ಥಿಯಾದ ಬಾಬು ಹೂನ್ನ ನಾಯಕ ಭಾವಚಿತ್ರಅಂಟಿಸುವ  ಇರುವ ಭಿತಿ ಪತ್ರ ಅಂದಾಜು ಸೈಜ್  6 8 ಇಂಚ್ ಅಂಟಿಸಿದ್ದು ಕಂಡುಬಂದಿದೆ ಇದರ ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ರೀತಿ ಅನಧಿಕೃತವಾಗಿ ಯಾವುದೇ ಪರವಾನಿಗೆ ಪಡೆಯದೆ ಭೀತಿ ಪತ್ರ ಅಂಟಿಸುವದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ  ಮಾಡಿರುತ್ತಾರೆ.  ಅಲ್ಲದೆ  ಪಾಂಪಪ್ಲೇಟಗಳ ಮೇಲೆ ಅಧಿಕೃತವಾಗಿ ಎಷ್ಟು ಪ್ರೀಂಟಗಳು ಮತ್ತು ತಯಾರಕರ ಹೆಸರು ವಿಳಾಸ ನಮೂದಿಸಿರುವದಿಲ್ಲ ಅಂತಾ ಶ್ರೀ, ನಾಗೇಂದ್ರ ಬಿರಾದಾರ ಗ್ರಾಮೀಣ ಮತಕ್ಷೇತ್ರದ ಚುನಾವಣೆ ಜಾಗೃತ ಅಧಿಕಾರಿಗಳು  ವರದಿ ಸಲ್ಲಿಸಿದ ಸಾರಂಶದ ಮೇಲಿಂದಠಾಣೆ ಗುನ್ನೆ ನಂ. 39/2013 ಕಲಂ. ಕರ್ನಾಟಕ ಓಪನ್ ಪ್ಲೇಸ್ ಪ್ರಿವೇನಶನ್ ಆಫ್ ಡಿಸ ಪಿಗರಮೇಂಟ್ ಕಾಯ್ದೆ -1981 ಸಬ್ ಕಲಂ. 3 ಸಂ. 188 ಐಪಿಸಿ ಪ್ರಕಾರ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ಅಜಯ ತಂದೆ ಜಗನ ರಾಠೋಡ ಸಾ:ಮಡ್ಡಿ ಶಹಾಬಾದರವರು ದಿನಾಂಕ:18/04/2013 ರಂದು ಮಧ್ಯರಾತ್ರಿ 00.45 ಎಎಂಕ್ಕೆ ನಾನು ಮತ್ತು ಶಿವಕುಮಾರ ತಂದೆ ಅಶೋಕ ರಾಠೋಡ ಕೂಡಿಕೊಂಡು ಭಂಕೂರ ಕ್ರಾಸದಿಂದ ಟಂ ಟಂ ನಂ.ಕೆಎ-33/4397 ನೇದ್ದರಲ್ಲಿ ಕುಳಿತುಕೊಂಡು ಶಹಾಬಾದಕ್ಕೆ ಬರುತ್ತಿದ್ದಾಗ ಮಧ್ಯರಾತ್ರಿ 1.15 ಎಎಂಕ್ಕೆ ಜಗಜೀವನರಾಮ ವೃತ್ತದ ಹತ್ತಿರ ರೋಡಿನ ಮೇಲೆ ತಿರುವಿನಲ್ಲಿ  ಟಂ ಟಂ ಚಾಲಕನು ಅತೀವೇಗ & ನಿಷ್ಕಾಳಜಿತನದಿಂದ ಚಲಾಯಿಸಿ ಒಮ್ಮೆಲೆ ಬ್ರೇಕ ಹಾಕಿದ್ದರಿಂದ ಟಂ ಟಂ ರೋಡಿನ ಎಡಗಡೆ ಪಲ್ಟಿಯಾಗಿ ಬಿದ್ದಿದ್ದರಿಂದ ನನಗೆ ಎಡಗೈಗೆ ಭಾರಿ ರಕ್ತಗಾಯವಾಗಿರುತ್ತದೆ ಮತ್ತು ಶಿವಕುಮಾರನಿಗೆ ಎಡಗೈ ಮತ್ತು ಎಡಗಾಲಿಗೆ ರಕ್ತಗಾಯ ಮತ್ತು ತರಚಿದ ಗಾಯವಾಗಿರುತ್ತದೆ. ಟಂ ಟಂ ಚಾಲಕನು ತನ್ನ ವಾಹನವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 64/2013 ಕಲಂ:279,337,338 ಐಪಿಸಿ ಸಂ:187 ಐಎಮ್‌ವಿ ಆಕ್ಟ್‌     ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ:ದಿನಾಂಕ:18-04-13 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ  ಸಿಬ್ಬಂದಿಯವರು ಅಫಜಲಪೂರ ಕ್ರಾಸ ಹತ್ತ್ಟಿರುವ ಎಂ.ಸಿ.ಸಿ. ಚೆಕ್ಕ ಪೋಸ್ಟದಲ್ಲಿದ್ದಾಗ, ಗುಲಬರ್ಗಾ ಕಡೆಯಿಂದ  ಬಿಳಿ ಬಣ್ಣದ ಇನೋವಾ ಕಾರ ನಂಬರ ಎಮ್ಎಚ್-13 /ಎಝಡ್-7011 ನೇದರ ವಾಹನ ನಿಲ್ಲಿಸಿ ತಪಾಸಣೆ ಮಾಡುವ ಕುರಿತು ನಿಲ್ಲಿಸಿದಾಗ ಕಾರಿನ ಹಿಂಭಾಗದ ಡಿಕ್ಕಿಯಲ್ಲಿ  ಸಮಾಜವಾದಿ ಪಕ್ಷ ಕರ್ನಾಟಕ ರಾಜ್ಯ ಸೈಕಲ ಚಿನ್ಹೆವುಳ್ಳ ಸ್ಟಿಕರಗಳು ಮೂರು ಬಂಡಲಗಳಿದ್ದು, ಕರಪತ್ರದ  ಎಡಭಾಗಕ್ಕೆ ಅಭ್ಯರ್ಥಿ ಭಾವಚಿತ್ರವಿದ್ದು, ಅದರ ಕೆಳಗಡೆ  ಗೋವಿಂದ ವ್ಹಿ.ಭಟ್ಟ್ ರಾಜ್ಯ ಉಪಾಧ್ಯಕ್ಷರು ಎಂದು ಕನ್ನಡದಲ್ಲಿ ಬರೆದಿದ್ದು  ಇರುತ್ತದೆ. ಸ್ಟಿಕರಗಳ ಮೇಲೆ ಮುದ್ರಕರ ಮತ್ತು ಪ್ರಕಾಶಕರ ಹೆಸರು ವಿಳಾಸ, ಅದರ ಸಂಖ್ಯೆ  ನಮೂದಿಸಿರುವುದಿಲ್ಲಾ. ಲಕ್ಷ್ಮಣ ತಂದೆ ಮಲ್ಲಪ್ಪ ಟಕ್ಕಳಕಿ  ಸಾ:ಹಾವನೂರ ತಾ: ಆಫಜಲಪೂರ ರವರು ಚುನಾವಣೆ ಅಧಿಕಾರಿಗಳಿಂದ ಪರವಾನಿಗೆ ಪಡೆಯದೇ ಮುದ್ರಣೆ ಮಾಡಿ ಚುನಾವಣೆ ಪ್ರಚಾರ ತೊಡಗಿದ್ದಲ್ಲದೇ ಮತ್ತು ಸಂಬಂಧಪಟ್ಟ ಚುನಾವಣೆ ಅಧಿಕಾರಿಗಳಿಂದ ಪರವಾನಿಗೆ ಪಡೆಯದೆ ಸ್ಟೀಕರಗಳು ಸಾಗಿಸಿ ಚುನಾವಣೆ ನೀತಿ ಸಂಹಿತೆ ಉಲ್ಲಂ ಘನೆ ಮಾಡುತ್ತಾರೆ. ಅಂತಾ ಶ್ರೀಡಾ:ಡಿ.ಎಂ. ಮಣ್ಣೂರು ಪ್ಲಾಯಿಂಗ್ ಸ್ವ್ಕಾಡ  ಎಂ.ಸಿ.ಸಿ. ಮಾದರಿ ಚುನಾವಣೆ ನೀತಿ ಸಂಹಿತೆ ಅಧಿಕಾರಿ 44- ಗುಲ್ಬರ್ಗಾ ದಕ್ಷಿಣ ವಿಧಾನಸಭಾ ಮತಕ್ಷೇತ್ರ ದ ಆಧಿಕಾರಿಯವರು ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ:203/2013 ಕಲಂ, 188 ಐಪಿಸಿ ಮತ್ತು 127 (ಎ) 133 ಆರ.ಪಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.