POLICE BHAVAN KALABURAGI

POLICE BHAVAN KALABURAGI

31 October 2013

Gulbarga District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ಮುಧೋಳ ಠಾಣೆ : ಶ್ರೀಮತಿ ಪಾರ್ವತಿ ಗಂಡ ಶಂಕರಗೌಡ ದೇಸಾಯಿ ಸಾ: ಕೊಲಕುಂದಾ ಇವರಿಗೆ ಈಗ್ಗೆ ಸುಮಾರು 11 ವರ್ಷಗಳ ಹಿಂದೆ ನಮ್ಮ ತಂದೆಯವರಾ ವೆಂಕಟ ರೆಡ್ಡಿ  ಇವರು ಕೊಲಕುಂದಾ  ಗ್ರಾಮದ ಪರ್ವತ ರೆಡ್ಡಿ  ಇವರ ಮಗನಾದ ಶಂಕರ ಗೌಡ ಇವರಿಗೆ ನನಗೆ ಕೊಟ್ಟು ಗುರು ಹಿರಿಯರ ಸಮ್ಮುಖದಲ್ಲಿ ಮದುವೆ ಮಾಡಿರುತ್ತಾರೆ. ನನಗೆ ಒಂದು ಹೆಣ್ಣು ಹಾಗು ಒಂದು ಗಂಡು ಮಕ್ಕಳು ಇರುತ್ತಾರೆ. ಮದುವೆಯ ಕಾಲಕ್ಕೆ ನನ್ನ ತಂದೆಯವರು ನನ್ನ ಗಂಡನಿಗೆ ಒಂದುವರೆ ಲಕ್ಷ ರೂಪಾಯಿ ಹಾಗು ಎರಡು ತೊಲೆ ಬಂಗಾರ ಕೊಟ್ಟಿರುತ್ತಾರೆ. ನನ್ನ ಮಧುವೆಯಾಗಿ ಒಂದು ವರ್ಷದವರೆಗೆ ನನ್ನ ಗಂಡ ನನಗೆ ಸರಿಯಾಗಿ ನೋಡಿಕೊಂಡಿರುತ್ತಾರೆ.   ನಂತರ ನನ್ನ ಗಂಡ ತವರು ಮನೆಯಿಂದ ಹಣ ತೆಗೆದುಕೊಂಡು ಬಾ ಅಂತಾ ದೈಹಿಕ ಹಾಗು ಮಾನಸಿಕ ಕಿರುಕುಳ ಕೊಡುತ್ತಿದ್ದನು. ನಾನು ಹಬ್ಬಕ್ಕೆ ಬಾಂದಾಗನಮ್ಮ ತಂದೆಯವರಿಂದ  ರೂ 50,000/-  ತೆಗೆದುಕೊಂಡು ಹೊಗಿ ನನ್ನ ಗಂಡನಿಗೆ ಕೊಟ್ಟಿರುತ್ತೇನೆ. ನನ್ನ ತಂದೆಯವರು.  ನನ್ನ ಗಂಡನಿಗೆ ಒಂದು ಮೊಟಾರ ಸೈಕಲ್ ಕೊಡಿಸಿರುತ್ತಾರೆ. ಹಾಗು ಸಿಮೇಂಟ ಏಜೇನ್ಸಿ ಕೊಡಿಸಿರುತ್ತಾರೆ. ಆದರು ನನ್ನ ಗಂಡ ನಿರಂತರವಾಗಿ ಕಿರುಕುಳ ಕೊಡುತ್ತಾ  ಬಂದಿರುತ್ತಾನೆ. ಮೊನ್ನೆ ದಿನಾಂಕ: 27-10-2013 ರಂದು ರಾತ್ರಿ 2200 ಗಂಟೆಯ ಸುಮಾರಿಗೆ  ಪುನಃ  ನನ್ನ  ಗಂಡ  ನನಗೆ ಇನ್ನು 50,000/- ರೂ. ನಿನ್ನ ತವರು ಮನೆಯಿಂದ ತೆಗೆದುಕೊಂಡು ಬಾ ಅಂತಾ  ಜಗಳಾ  ತೆಗೆದಿರುತ್ತಾನೆ ಆಗ ನಾನು ನನ್ನ ಗಂಡನಿಗೆ ನಾವು 5 ಜನ ಅಕ್ಕ ತಂಗಿಯಂದಿಯರು ಇರುತ್ತೇವೆ ನಮ್ಮ ತಂದೆ ಎಲ್ಲರಿಗು ನೋಡಿಕೊಳ್ಳಬೇಕು ಆದ್ದರಿಂದ ನಾನು ತವರು ಮನೆಯಿಂದ ಹಣ ತರುವದಿಲ್ಲಾ ಅಂತಾ ಹೇಳಿದಕ್ಕೆ ನನಗೆ ನನ್ನ ಗಂಡ ಅವಾಚ್ಯ ಶಬ್ದಗಳಿಂದ ಬೈದು  ನೀನು ತವರು ಮನೆಯಿಂದ ಹಣ ತರುವದಿಲ್ಲಾ ಅಂತಾ ಹೇಳುತಿ ಎಂದು ಕೈಯಿಂದ ಹೊಡೆ ಬಡೆ ಮಾಡಿನನ್ನ ಕುತ್ತಿಗೆ ಹಿಡಿದು ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶಿವಪ್ಪ ತಂದೆ ಚಂದ್ರಶಾ ರವರು ದಿನಾಂಕ: 30-10-2013 ರಂದು ಮಧ್ಯಾಹ್ನ 1=30 ಗಂಟೆ ಸುಮಾರಿಗೆ ಎನ್.ವಿ.ಶಾಲೆಯ ಎದುರಿನ ರೋಡಿನ ಪಕ್ಕದಲ್ಲಿ ನನ್ನ ಸೈಕಲ ರಿಕ್ಷಾ ನಿಲ್ಲಿಸಿ ರೋಡ ದಾಟಿ ಚಹಾ ಕುಡಿದು ವಾಪಸ್ಸ ರೀಕ್ಷಾ ಹತ್ತಿರ ಬರುವಾಗ ಆನಂದ ಹೊಟೇಲ ಕಡೆಯಿಂದ ಮೋ/ಸೈಕಲ್ ನಂ: ಕೆಎ 32 ಇಬಿ 3174 ರ ಸವಾರ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತಮಾಡಿ ಗಾಯಗೊಳಿಸಿ ವಾಹನ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 30-10-2013 ರಂದು 01-20 ಪಿ.ಎಮ್ ಕ್ಕೆ ಶ್ರೀ ಧೂಳಪ್ಪಾ ತಂದೆ ಅಂಬಾರಾಯ ನಾಟಿಕಾರ,  ಸಾಃ ಶಿವಾಜಿ ನಗರ ಗುಲಬರ್ಗಾ   ರವರು  ತನ್ನ ಅಟೋರಿಕ್ಷಾ ನಂ. ಕೆ.ಎ 32 ಬಿ 8605 ನೇದ್ದರಲ್ಲಿ ಪಾಂಡು ಇವರನ್ನು ಕೂಡಿಸಿಕೊಂಡು ರಘೋಜಿ ಪೈನಾನ್ಸ ಹತ್ತಿರ ಚಲಾಯಿಸಿಕೊಂಡು ಹೊಗುತ್ತಿದ್ದಾಗ ಕಾರ ನಂ. ಕೆ.ಎ 32 ಜೆಡ್ 3232 ನೇದ್ದರ ಚಾಲಕ ತನ್ನ ಕಾರನ್ನು ಹುಮನಾಬಾದ ರಿಂಗ ರೋಡ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಅಟೋರಿಕ್ಷಾಕ್ಕೆ ಎದರುನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು ಅಪಘಾತದಿಂದ ಫಿರ್ಯಾದಿಗೆ ಬಲಗಣ್ಣಿನ ಹುಬ್ಬಿಗೆ ಬಾಯಿಯ ಕೆಳತುಟಿಗೆ ರಕ್ತಗಾಯವಾಗಿದ್ದು ತಲೆಗೆ ಮತ್ತು ಎರಡು ಮೊಳಕಾಲುಗಳಿಗೆ ಗುಪ್ತ ಪೆಟ್ಟಾಗಿರುತ್ತದೆ. ಅಟೋರಿಕ್ಷಾ ಕುಳಿತು ಹೊರಟ ಪಾಂಡು ಇವರಿಗೆ ಬಲಗಾಲು ಮೊಳಕಾಲು ಕೆಳಗೆ ರಕ್ತಗಾಯವಾಗಿ ಗುಪ್ತ ಪೆಟ್ಟಾಗಿದ್ದು ಅಪಘಾತ ಪಡಿಸಿದ ಕಾರ ಚಾಲಕ ವಾಹನ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ದ್ವೀಚಕ್ರ ವಾಹನ ಕಳವು ಪ್ರಕರಣ :

ಅಶೋಕ ನಗರ ಠಾಣೆ : ಶ್ರೀ ಸೈಯದ ಮಸುದ ಅಲ್ವಿ ತಂದೆ ಸೈಯದ ಮೈನುದ್ದಿನ್ ಅಲ್ವಿ ಸಾಪ್ಲಾಟ ನಮ: 03 ಮಿಸ್ಬಾ ನಗರ ರಿಂಗ್ ರೋಡ ಗುಲಬರ್ಗಾ ರವರು ದಿನಾಂಕ: 29-09-2013 ರಂದು ಬೆಳಿಗ್ಗೆ ತರಕಾರಿ ತಲರು ಕಣ್ಣಿ ಮಾರ್ಕೆಟಗೆ ಬಂದಾಗ ಸಮಯ 11-15 ಎಎಮ್ ಕ್ಕೆ ನಾನು ನಿಲ್ಲಿಸಿದ ಗಾಡಿ ಬಂದು ನೊಡಲಾಗಿ ಕಾಣಲಿಲ್ಲ ನಂತರ ಠಾಣೆಗೆ ಬಂದು ತಿಳಿಸಿರುತ್ತೇನೆ. ಎಲ್ಲಾ ಕಡೆ ಹುಡಕಾಡಿ ಇಂದು ಠಾಣೆಗೆ ಬಂದು ದೂರು ನೀಡಿರುತ್ತೇನೆ.  ಕಾರಣ ನನ್ನ ಹಿರೊಹೊಂಡಾ ಸ್ಪ್ಲೆಂಡರ ಕಪ್ಪು ಬಣ್ಣದ್ದು 2001 ರ ಮಾದರಿ ಅದರ ಪೆಟ್ರೋಲ್ ಟ್ಯಾಂಕ ಗೆ ಎಮ-ಸಿಲ್ ಹಚ್ಚಿದ್ದು ಗಾಡಿ ನಂ: ಕೆಎ- 36 ಜೆ-6778 ಅ.ಕಿ. 22,000/- ರೂ ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

30 October 2013

Gulbarga District Reported Crimes

ಕಳವು ಪ್ರಕರಣ:
ಸ್ಟೇಷನ ಬಜಾರ ಠಾಣೆ : ಶ್ರೀ ಶ್ಯಾಮಸುಂದರ ತಂಧೆ ಗಜಾನನರಾವ ಸಾ|| ಮನೆ ನಂ.1-89/ಎ ರಾಘವೇಂದ್ರ ನಿವಾಸ ಐವಾನ ಇ ಶಾಹಿ ಕಾಲೂಣಿ ಇವರು ದಿನಾಂಕ. 29.10.2013 ರಂದು ಮದ್ಯಾಹ್ನ 2.30 ಗಂಟೆಗೆ ತಮ್ಮ ವಯಕ್ತಿಕ ಕೆಲಸದ ನಿಮಿತ್ಯ ಹೊರಗಡೆ ಹೋಗಿದ್ದು ತಾಯಿ ಒಬ್ಬಳಿಗೆ ಮನೆಯಲ್ಲಿ ಬಿಟ್ಟು ಹೋಗಿದ್ದು ಅವರು ಮನೆಯಲ್ಲಿದ್ದು ಬಾಗಿಲು ಸ್ವಲ್ಪ ಮುಂದಕ್ಕೆ ಮಾಡಿ ಒಳಗಡೆ ಮಲಗಿಕೊಂಡಾಗ ಯಾರೋ ಒಬ್ಬ ಹೆಣ್ಣುಮಗಳು ಮನೆಯ ಬಾಗಿಲನ್ನು ದಬ್ಬಿ ತೆರೆದು ಮನೆಯಲ್ಲಿ ಬಂದು ಮನೆಯಲ್ಲಿಯ ದೇವರ ಜಗಲಿಯ ಮೇಲಿದ್ದ ಎರಡು ಬೆಳ್ಳಿಯ ಪ್ಲೇಟ,  ಮೂರು ಬೆಳ್ಳಿಯ ನಿಲಂಜನ, ಎರಡು ಬೆಳ್ಳಿಯ ಗ್ಲಾಸ, ಎರಡು ಬೆಳ್ಳಿಯ ಬೋಗೊನಿ, ಒಂದು ಬೆಳ್ಳಿಯ ಚಮಚ, ಒಂದು ಹಿತ್ತಾಳಿಯ ತಟ್ಟೆ ಹೀಗೆ ಒಟ್ಟು  ಅ.ಕಿ|| 24,500/- ರೂ ಬೆಲೆಬಾಳುವ ಬೆಳ್ಳಿಯ ವಸ್ತುಗಳನ್ನು ಕಳ್ಳತನ ಮಾಡಿಕೋಮಡು ಹೋಗಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀಮತಿ ಗಿರಿಜಾಬಾಯಿ ಗಂಡ ಶಿವಶಂಕರ ಕಣ್ಣಿ ಸಾಃ ಗುಬ್ಬಿ ಕಾಲೋನಿ ಗುಲಬರ್ಗಾ ಇವರು, ದಿನಾಂಕಃ 29-10-2013 ರಂದು 07:30 ಎ.ಎಂ. ಕ್ಕೆ ಶಾರದಬಾಯಿ ಇವಳ ಮನೆಯ ಅಂಗಳದಲ್ಲಿ ಹೋಗಿ ನನ್ನ ಮಗ ಕೊಟ್ಟ 50 ಸಾವಿರ ರೂ. ಕೊಡು ಅಂತಾ ಕೇಳಿದಕ್ಕೆ ಶಾರದಾಬಾಯಿ ಇವಳು ಸಿಟ್ಟಿಗೆ ಬಂದು ಭೋಸಡಿ ನಿನಗೆ ಹಣ ಕೊಡುವುದಿಲ್ಲ ರಂಡಿ ನೀನು ಏನು ಮಾಡಿಕೊಳ್ಳುತ್ತಿ ಮಾಡಕೋ ಅಂತಾ ಜಗಳಕ್ಕೆ ಬಿದ್ದು ತಲೆಯ ಕೂದಲು ಹಿಡಿದಳು ಅಷ್ಟರಲ್ಲಿ ಶರಣಪ್ಪಾ ಮತ್ತು ಪ್ರಭು ಮನೆಯಿಂದ ನಾಗಮ್ಮ ಅವಳೊಂದಿಗೆ ಅಂಗಳಕ್ಕೆ ಬಂದು ಶರಣಪ್ಪ ಮತ್ತು ಪ್ರಭು ಇವರು ನನ್ನ ಕೈಗಳನ್ನು ಒತ್ತಿ ಹಿಡಿದು ಅವಮಾನಗೊಳಸಿದ್ದು ಮತ್ತು ನಾಗಮ್ಮ ಇವಳು ಕೈಯಿಂದ ಬೆನ್ನಿನ ಮೇಲೆ ಹೊಡೆದು ಗುಪ್ತಗಾಯ ಪಡಿಸಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಹಲ್ಲೆ ಪ್ರಕರಣಗಳು :
ಫರತಾಬಾದ ಠಾಣೆ :
ಶ್ರೀ ಬಸಪ್ಪ ತಂದೆ ಬೈಲಪ್ಪ ಬಾಸಗಿ ಸಾ: ಜೋಗುರ   ರವರು ದಿನಾಂಕ 28-10-2013 ರಂದು ತಮ್ಮ ಹೊಲದಲ್ಲಿನ ಸೂರ್ಯಪಾನ ರಾಶಿಯನ್ನು ಮಾಡುವ ಸಲುವಾಗ ನಮ್ಮೂರಿನ ಹಣಮಂತ ಯಳಸಂಗಿ ಇವರ ರಾಶಿಯ ಮಸೀನ ತಗೆದುಕೊಂಡು ನಾನು ಮತ್ತು ಅವರ ಆಳು ಮಗ ಶರಣು ಮ್ಯಾಕೇರಿ ಇಬ್ಬರು ಕೂಡಿಕೊಂಡು ನಮ್ಮ ಹೊಲಕ್ಕೆ ಹೊರಟಿದ್ದೇವು. ನಮ್ಮ ಹೊಲಕ್ಕೆ ಹೋಗುವ ದಾರಿಯ ಮಧ್ಯದಲ್ಲಿ ಇರುವ ನಮ್ಮ ಅಣ್ಣತಮ್ಮಕಿಯ ಹೊಲದವರಾದ ಶರಣಪ್ಪಾ ಮತ್ತು ಅವನ ಅಕ್ಕಳಾದ ಭೀಮಾರತಿ ಇವರು ಬದು ಇದ್ದು ನಮ್ಮ ಹೊಲ ಇದೆ ಇಲ್ಲಿ ದಾರಿ ಇಲ್ಲ ಇಲ್ಲಿಂದ ಹೋಗಬೇಡ ಅಂತಾ ಹೇಳಿದಾಗ ಬಾಯಿಮಾತಿನ ಜಗಳವಾಗಿದ್ದು  ರಾತ್ರಿ 8:30 ಗಂಟೆಯ ಸುಮಾರಿಗೆ ನಮ್ಮೂರಿನ ಹಿರಿಯರಲ್ಲಿ ಸದರಿ ವಿಷಯವನ್ನು ಹೇಳಿ ಬರಲು ನಾನು ಮತ್ತು ನಮ್ಮ ತಾಯಿ ಅಂಬಾಬಾಯಿ ಇಬ್ಬರು ಕೂಡಿಕೊಂಡು ಹೋಗಿ ಹೇಳಿ ನಮ್ಮ ಮನೆಯ ಮುಂದೆ ಬರುತ್ತಿರುವಾಗ ನಮ್ಮ ಅಣ್ಣತಮ್ಮಕೀಯವರಾದ 1) ಶರಣಪ್ಪ ತಂದೆ ದೆವೇಂದ್ರಪ್ಪ ಭಾಸಗಿ 2) ದೆವೇಂದ್ರ ತಂದೆ ತಿಪ್ಪಣ್ಣ ಭಾಸಗಿ 3) ಅನಿಲ ತಂದೆ  ದೆವೇಂದ್ರ ಭಾಸಗಿ ಮತ್ತು 4) ಭೀಮಾರಥಿ ತಂದೆ ದೆವೇಂದ್ರ ಭಾಸಗಿ ಇವರೆಲ್ಲರೂ ಕೂಡಿಕೊಂಡು  ಬಂದು ನಮ್ಮನ್ನು ತಡೆದು ನನಗೆ ಏ ರಂಡಿ ಮಗನೆ ಶರಣ್ಯ ನಿನಗ ಹೊಲದಾಗ ದಾರಿ ಬೇಕು ಬಾ ಈಗ ಮಗನೆ ಅಂತಾ ಬೈಯುತ್ತಿದ್ದಾಗ ನಾನು ಸುಮ್ಮನೆ ಬೈಯಬೇಡ ನಾಳೆ ಹಿರಿಯರ ಮುಂದೆ ಕುಳಿತು ಬಗೆ ಹರಿಸಿಕೊಳ್ಳಮಿ ಅಂತಾ ಹೇಳಿದಾಗ ಅವಾಚ್ಯಶಬ್ದಗಳಿಂದ ಬೈಯುತ್ತಾ ಶರಣಪ್ಪ ಇತನು ಕೈ ಮುಷ್ಟಿ ಮಾಡಿ ನನ್ನ ಹೊಟ್ಟೆಯ ಮೇಲೆ ಗುದ್ದಿರುತ್ತಾನೆ, ದೆವೇಂದ್ರ ಇತನು ಕೈಯಿಂದ ಕಪಾಳ ಮೇಲೆ ಹೊಡೆದಿರುತ್ತಾನೆ.ಆಗ ಅಲ್ಲೆಯಿದ್ದ ನಮ್ಮ  ತಾಯಿ ಅಂಬಾಬಾಯಿ ಬಿಡಿಸಲು ಬಂದರೆ ಅವಳಿಗೆ ಭಿಮಾರಥಿ ಇವಳು ಈ ರಂಡಿದೆ ಎಲ್ಲಾ ಅಂತಾ ಬೈದು ಸೀರೆ ಹಿಡಿದು ಎಳೆದಾಡಿ ಹೊಟ್ಟೆಯ ಮೇಲೆ ಗುದ್ದಿ ನೂಕಿ ಕೊಟ್ಟಿರುತ್ತಾಳೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಫಜಲಪೂರ ಠಾಣೆ :
ಶ್ರೀ ಶ್ರೀಶೈಲ ತಂದೆ ಧರ್ಮಣ್ಣಾ ಜಮಾದಾರ ಇವರು ದಿನಾಂಕ29-10-2013 ರಂದು ಬೆಳಿಗ್ಗೆ 07 00 ಗಂಟೆಗೆ ನಾನುನಮ್ಮಮನೆಯ ಮುಂದೆ ಇದ್ದ ನಳದಿಂದ ನೀರುತುಂಬುತ್ತಿರುವಾಗ ನಮ್ಮ ಮನೆಯಹತ್ತಿರ ಇದ್ದ 1]ಕಲ್ಲಪ್ಪಗೌಡ ತಂದೆಸಂಗಣಗೌಡಪಾಟೀಲ,2]ಮಹಾರುದ್ರಪ್ಪ ತಂದೆ ಸಂಗಣಗೌಡ ಪಾಟೀಲ,3]ಸಂಗಣಗೌಡ ತಂದೆಚಂದ್ರಶಾ ಪಾಟೀಲಇವರುತಮ್ಮ ಕೈಯಲ್ಲಿ ಬಡಿಗೆಗಳನ್ನು ಹಿಡಿದುಕೊಂಡು ನನ್ನಹತ್ತಿರಬಂದು  ಭೋಸಡಿ ಮಗನೆಶಿರಶ್ಯಾ ನಿಮಗೆಎಷ್ಟು ಸಲ ಹೇಳಿದರು ಕೇಳದೆ ಮತ್ತೆ ಬಚ್ಚಲನೀಲುರಸ್ತೆಗೆ ಬಿಡುತ್ತಿರಿ ಮಕ್ಕಳ್ಯ ನಿಮಗ ಸೊಕ್ಕೆ ಬಹಳಬಂದಿದೆನೋಡಕೋತಿವಿ ಅಂತಾಅನ್ನುತ್ತಿರುವಾಗ ನಾನು ನಮ್ಮ ಬಚ್ಚಲ ನೀರುರಸ್ತೆಯಿಲ್ಲಿ ಬಿಟ್ಟರೆ  ನಿಮಗೇನ ತೊಂದರೆ ಆಗುತ್ತದೆ ಅಂತಾ ಕೇಳಿದ್ದಕ್ಕೆ ಎಲ್ಲರು ಸೇರಿ ಕೈಯಿಂದ ಮತ್ತು ಬಡಿಗೆಯಿಂದ ಹೊಡೆ ಬಡೆ ಮಾಡಿ ನಿಮಗ ಜೀವ ಸಹೀತಬಿಡುವುದಿಲ್ಲ ಅಂತಾ ಅನ್ನುತ್ತಾ ಅಲ್ಲಿಂದ ಹೋದರು, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ :
ತಿರುಪತಿ ತಂದೆ ಇಟಪ್ಪಾ ಅಡಕಿ  ಸಾ: ಹಾಗರಗುಂಡಗಿ  ತಾ:ಜಿ: ಗುಲಬರ್ಗಾ  ರವರ  ಹೊಲ ಸರ್ವೆ ನಂ: 199 ನೇದ್ದು 3 ಎಕರೆ 20 ಗುಂಟೆ ಜಮೀನು ನಮ್ಮೂರಿನ ನಾಗಣ್ಣಾ ವಜಾಪೂರೆ ಇವರ ಮಧ್ಯಸ್ಥಿಕೆಯಲ್ಲಿ 1 ಎಕರೆಗೆ 7 ಲಕ್ಷ 10 ಸಾವಿರ ರೂಪಾಯಿಂತೆ ದಿನಾಂಕ: 23-4-2013 ರಂದು ಶಿವಾನಂದ ಗಾಲಿಬಾ ಇವರಿಗೆ ನಮ್ಮ ಹೊಲ 3 ಎಕರೆ 20 ಗುಂಟೆ ಹೊಲವನ್ನು ಮಾರಾಟ ಮಾಡಿದ್ದು ಇರುತ್ತದೆ. 3 ಎಕರೆ 20 ಗುಂಟೆ ಜಮೀನಿನಲ್ಲಿ 2 ಎಕರೆ 20 ಗಂಟೆ ಜಮೀನು ಅವರ ಹೆಸರಿಗೆ ನೊಂದಾಣಿ ಮಾಡಿಕೊಟ್ಟಿದ್ದು, ಅದರಲ್ಲಿ ಇನ್ನು 64 ಸಾವಿರ ಹಣ ಕೊಡುವದು ಬಾಕಿ ಇಟ್ಟುಕೊಂಡಿದ್ದು ಅಲ್ಲದೆ ಇನ್ನೂಳಿದ 1 ಎಕರೆ ಜಮೀನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಹೊಲ ಮಾರಾಟ ಮಾಡಿದ ಮಧ್ಯಸ್ಥಿಕೆ ವಹಿಸಿಕೊಂಡ ನಾಗಣ್ಣಾ ವೈಜಾಪೂರ ಇವರಿಗೆ ನಮ್ಮ ತಮ್ಮ ಗಣಪತಿ ಕೇಳಲು ಹೋದಾಗ ಅವನು ಇನ್ನುಳಿದ 1 ಎಕರೆ ಜಮೀನು ಖರಾಬ ಜಮೀನಾಗಿದ್ದರಿಂದ ಅದನ್ನು ತಗೆದುಕೊಳ್ಳುವುದಿಲ್ಲ, ಹಣವು ಕೊಡುವುದಿಲ್ಲ ಅಂತಾ ಹೇಳಿದ್ದನ್ನು ನಿನ್ನೆ ದಿನಾಂಕ: 28-10-2013 ರಂದು 6.30 ಪಿ.ಎಮ್ಕ್ಕೆ ನನ್ನ ತಮ್ಮನು ಕಿರಾಣ ಅಂಗಡಿಗೆ ಬಂದು ನನಗೆ ತಿಳಿಸಿದನು.  ಆಗ ನಾನು ನಾಳೆ ಬೆಳಗ್ಗೆ ಕೇಳಿದರಾಯಿತು ಅಂತಾ ಸುಮ್ಮನೆ ಆಗಿ ಕಿರಾಣಿ ಅಂಗಡಿಯಲ್ಲಿ ಕುಳಿತ್ತೇನು. ರಾತ್ರಿ 7-30 ಗಂಟೆಯ ಸುಮಾರಿಗೆ ನಾಗಣ್ಣಾ ವೈಜಾಪೂರ ಈತನ ತಮ್ಮಂದಿರಾದ 1) ಶರಣಪ್ಪಾ ತಂದೆ ರಾಣೋಜಿ ವೈಜಾಪೂರ, 2) ಶ್ರೀಮಂತ ತಂದೆ ರಾಣೋಜಿ ವೈಜಾಪೂರ ಹಾಗೂ ಅವರ ಸಂಬಂಧಿ ಆಕಾಶ ತಂದೆ ತೇಜಿರಾಯ ವೈಜಾಪೂರ ಇವರೆಲ್ಲರೂ ಕೂಡಿ ನಮ್ಮ ಕಿರಾಣಿ ಅಂಗಡಿಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಹೊಡೆಬಡೆ ಮಾಡಿ ಜೀವದ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೃಹಿಣಿಗೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ :

ಶ್ರೀಮತಿ ಸುನೀತಾ ಗಂಡ ಸಂತೋಷ ಕುಮಾರ ಹಾಗರಗಿ ಸಾ:ಶಹಾಬಜಾರ ಮರಗಮ್ಮ ಗುಡಿಯ ಹತ್ತಿರ ಗುಲಬರ್ಗಾ ನನ್ನ ಮದುವೆಯು ದಿನಾಂಕ 13-05-2007 ರಂದು ಗುಲಬರ್ಗಾ ನಗರದ ಶಿವಾಜಿ ನಗರದಲ್ಲಿ ಸಂತೋಷ ಕುಮಾರ ಹಾಗರಗಿ ಇವರೊಂದಿಗೆ ಶಿವಾಜಿನಗರದಲ್ಲಿರುವ ಶ್ರೀ ಬಸಲಿಂಗೇಶ್ವರ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ನನ್ನ ತವರು ಮನೆಯವರು ಮದುವೆ ಮಾಡಿಕೊಟ್ಟಿದ್ದು, ಇರುತ್ತದೆ. ಮದುವೆಯಾದ 2 ತಿಂಗಳ ವರೆಗೆ ನನಗೆ ಚೆನ್ನಾಗಿ ಇಟ್ಟುಕೊಂಡು ನಂತರ ಪತಿ ಸಂತೋಷ ಕುಮಾರ , ಅತ್ತೆ ಬಸವಲಿಂಗಮ್ಮ ಮತ್ತು ಮಾವ ಚಂದ್ರಕಾಂತ ಇವರು ನಿನ್ನ ತವರು ಮನೆಯಿಂದ 5 ತೊಲೆ ಬಂಗಾರ 1 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ ಎಂದು ಹೇಳುತ್ತಾ ತಾನು ತರದೇ ಹೋದ ಸಂದರ್ಭದಲ್ಲಿ ಆಗಾಗ ತನಗೆ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡುತ್ತಿದ್ದರು ದಿನಾಂಕ 27-10-2013 ರಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ಮನೆಯಲ್ಲಿದ್ದಾಗ ನಿನ್ನ ತವರು ಮನೆಯಿಂದ 5 ತೊಲೆ ಬಂಗಾರ ಹಾಗೂ 1 ಲಕ್ಷ ರೂಪಾಯಿ ನಿನ್ನ ತವರು ಮನೆಯಿಂದ ವರದಕ್ಷಿಣೆ ಹಣ ಬಂಗಾರ ತೆಗೆದುಕೊಂಡು ಬರುವಂತೆ ಒತ್ತಾಯಿಸಿ ಪತಿ ಸಂತೋಷ, ಅತ್ತೆ ಬಸಲಿಂಗಮ್ಮ ಮತ್ತು ಮಾವ ಚಂದ್ರಕಾಂತ ಇವರು ಕೂಡಿಕೊಂಡು ನನಗೆ ವರದಕ್ಷಿಣೆ ಹಣ ಬಂಗಾರ ತರುವವರೆಗೆ ಮನೆಗೆ ಬರಬೇಡಾ ಅಂತಾ ಹೊಡೆ ಬಡೆ ಮಾಡಿ ಕೂದಲು ಹಿಡಿದು ಎಳೆದಾಡಿ ಎಡ ಕಪಾಳ ಮೇಲೆ ಹೊಡೆದು, ನನ್ನ ಚಿಕ್ಕ ಮಗಳಿಗೆ ಅವರ ಹತ್ತಿರ ಇಟ್ಟುಕೊಂಡು ನನಗೆ ಮನೆಯಿಂದ ಹೊರ ಹಾಕಿದ್ದು, ಇರುತ್ತದೆ. ಅಲ್ಲದೇ ನನ್ನ ತಂದೆ ಕೆಲಸ ನಿರ್ವಹಿಸುತ್ತಿರುವ ಗುಲಬರ್ಗಾ ನಗರದ ಸುಪರ ಮಾರ್ಕೆಟ ಬಡಾವಣೆಯ ದಂಡೋತಿ ಹೋಲ್ ಸೇಲ್ ಬಟ್ಟೆ ಅಂಗಡಿಗೆ ಬಂದು ನನ್ನ ತಂದೆಗೆ ನನ್ನ ಪತಿಯವರು ಜೀವದ ಬೆದರಿಕೆ ಒಡ್ಡಿ ಅವಮಾನ ಮಾಡಿದ್ದು, ಇರುತ್ತದೆ ನನ್ನ ಪತಿಯವರು ಹಾಗೂ ಅವರ ಕುಟುಂಬದವರು ನನಗೆ ಆಗಾಗ ಮೇಲಿಂದ ಮೇಲೆ ಕಿರುಕುಳ ನೀಡುತ್ತಾ ಬಂದಿರುತ್ತಾರೆ.ಆದ್ದರಿಂದ ದಯಾಳುಗಳಾದ ತಾವುಗಳು ಈ ನನ್ನ ಮನವಿ ಅರ್ಜಿಯನ್ನು ಪರಿಶೀಲಿಸಿ ನನಗೆ ವರದಕ್ಷಣೆ ಕಿರುಕುಳ ನೀಡಿ ಕೊಲೆಗೆ ಯತ್ನ ಗೈದ ಹಾಗೂ ನನ್ನ ತಂದೆ- ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

29 October 2013

Gulbarga District Reported Crimes

ಹಲ್ಲೆ ಪ್ರಕರಣಗಳು :
ವಾಡಿ ಠಾಣೆ : ಶ್ರೀ  ಇರ್ಫನ ತಂದೆ ಮಹ್ಮದ ಇಬ್ರಾಹಿಂ ಸಾಬ ಕೆ.ಇ.ಬಿ ವಾಲೆ  ಸಾ||ಫತೆ ಮಂಜೀಲ್ ವಾಡಿ ರವರು ದಿನಾಂಕ 28-10-2013 ರಂದು ರಾತ್ರಿ 7-00 ಸುಮಾರು ಅಬ್ಜಲ್ ಈತನು ನಮಾಜ ಮೂಗಿಸಿಕೊಂಡು ಮನೆಗೆ ಬರುವಾಗ ಶೆಲ್ಲು ತಂದೆ ಮಹ್ಮದ ಪಟೇಲ ಈತನು ಜಗಳ ಮಾಡಿ ಕೈಯಿಂದ ಹೊಡೆಬಡೆ ಮಾಡಿದ್ದು ಈ ವಿಷಯ ಶಮಶಿರ ತಂದೆ ನಾಸೀರ ಈತನಿಗೆ ಫೊನ ಮಾಡಿ ತಿಳಿಸಿದ್ದಕ್ಕೆ ಅದೆ ವೈಮನಸ್ಸಿನಿಂದ ರಾತ್ರಿ 8 ಗಂಟೆಯ ಸುಮಾರು ಇರ್ಪಾನ ಈತನು ಒಲಿಮಾ ದಾವತಕ್ಕೆ ಕಮಲಿಬಾಬಾ ದರ್ಗಾದ ಪಕ್ಕದಲ್ಲಿರುವ ಶಾದಿಖಾನಕ್ಕೆ ಹೊಗುವ ಕಾಲಕ್ಕೆ ಇರ್ಫಾನ ತಂದೆ ಮಹ್ಮದ ಪಟೇಲ್ ಸದ್ದಾಂ ತಂದೆ ಮಹ್ಮದ ಪಟೆಲ್, ಶಲ್ಲು ತಂದೆ ಮಹ್ಮದ ಪಟೆಲ್, ಇಮ್ರಾನ ಹಾಗು ಸಂಗಡ 8,10 ಜನರು ಕೈಯಲ್ಲಿ ರಾಡ ಮತ್ತು ತಲವಾರ ಹಿಡಿದುಕೊಂಡು ಬಂದವರೆ ಇರ್ಪಾನ ಈತನಿಗೆ ಸುತ್ತುವರೆದು ತಡೆದು ನಿಲ್ಲಿಸಿ ಇರ್ಪಾನ ಈತನು ಮಾರೊ ಸಾಲೆಕು, ಹಮಾರಾ ಭಾಯಿ ಶಮಶಿರಕೊ ಫೊನ ಕರಕೆ ಬೊಲತಾ ಸಾಲೆ ಅಂತಾ ಬೈಯುತ್ತಿದ್ದಂತೆ ಸದ್ದಾಂ ತನ್ನ ಕೈಯಲ್ಲಿದ್ದ ತಲವಾರದಿಂದ ತೆರೆಕು ಖಲಾಸ ಕರತಾಹು ಅಂತಾ ಕುತ್ತಿಗೆಗೆ ಹೊಡೆಯಲು ಹೊದಾಗ ತಪ್ಪಿಸಿಕೊಳ್ಳಲು ಎಟು ತಲೆಯ ಮದ್ಯದಲ್ಲಿ ಬಿದ್ದು ಖಾರಿ ರಕ್ತಗಾಯವಾಗಿದ್ದು ಮೈತುಂಬ ಗಾಯಗಳಾಗಿದ್ದು ನನಗೆ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಫರತಾಬಾದ ಠಾಣೆ : ಕುಮಾರಿ  ಭೀಮಾರತಿ ತಂದೆ ದೇವಿಂದ್ರಪ್ಪಾ ಭಾಸಗಿ  ಸಾ: ಜೋಗೂರು ತಾ:ಜಿ: ಗುಲಬರ್ಗಾ ಇವರು ದಿನಾಂಕ: 28-10-2013 ರಂದು ಬೆಳಗ್ಗೆ 10-00 ಗಂಟೆಯ ಸುಮಾರಿಗೆ ತಮ್ಮ ಹೊಲ ಸರ್ವೆ ನಂ: 18 ರಲ್ಲಿ ನಾನು, ನಮ್ಮ ತಾಯಿ ಜಗದೇವಿ ಮತ್ತು ನನ್ನ ತಮ್ಮ ಶರಣು ಭಾಸಗಿ ಎಲ್ಲರು ಕೂಡಿ ನಮ್ಮ ಹೊಲದಲ್ಲಿ ಹತ್ತಿ ಬೆಳೆಗೆ ಎಣ್ಣೆ ಹೊಡೆಯಲು ಹೋಗಿರುತ್ತೇವೆ. ನಮ್ಮ ಹೊಲದ ಪಕ್ಕದಲ್ಲಿರುವ ಇರುವ ನಮ್ಮ ದೊಡ್ಡಪ್ಪನಾದ ಬೈಲಪ್ಪಾ ಭಾಸಗಿ ಇವರ ಎತ್ತುಗಳು ಸಾಯಂಕಾಲ 5-00 ಗಂಟೆಯ ಸುಮಾರಿಗೆ ನಮ್ಮ ಹೊಲದಲ್ಲಿ ಬಂದು ಮೆಣಸಿನ ಬೆಳೆ ಹಾಳು ಮಾಡುತ್ತಿರುವದನ್ನು ನೋಡಿ ನಮ್ಮ ತಮ್ಮನು ದೊಡ್ಡಪ್ಪನಿಗೆ ನಿಮ್ಮ ಎತ್ತುಗಳು ಹೊಡೆದುಕೊಳ್ಳಿ ಅಂತಾ ಅಂದಾಗ ಸದರಿ ನಮ್ಮ ದೊಡ್ಡಪ್ಪ ಬೈಲಪ್ಪನು ನಮ್ಮ ತಮ್ಮನಿಗೆ ಏ ಭೊಸಡಿ ಮಗನೇ ನಿಮದು ಬಹಳ ಆಗ್ಯದಾ ಅಂತಾ ಬೈಯುತ್ತಿದ್ದಾಗ ನಾನು ಯಾಕೇ ಬೈಯುತ್ತಿ ದೊಡ್ಡಪ್ಪ ಅಂತಾ ಅಂದಾಗ ನಮ್ಮ ದೊಡ್ಡಪ್ಪ ಬೈಲಪ್ಪ,  ದೊಡ್ಡವ್ವ ಅಂಬಾಬಾಯಿ, ಬೈಲಪ್ಪನ ಮಗ ನಾಗಪ್ಪಾ ಭಾಸಗಿ  ಹಾಗೂ ನಮ್ಮೂರಿನ ಶ್ರೀಶೈಲ ಸಣ್ಣಮನಿ, ಹುಲೇಪ್ಪಾ ಸಣ್ಣಮನಿ ಇವರೆಲ್ಲರೂ ಕೂಡಿಕೊಂಡು ನಮ್ಮ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ಬಂದವರೇ ಅವರಲ್ಲಿ ದೊಡ್ಡಪ್ಪ ಬೈಲಪ್ಪನು ನನಗೆ ಏ ರಂಡಿ ನಿಮದು ಬಹಳ ಆಯಿತು ಅಂತಾ ಅನ್ನುತ್ತಾ ನನಗೆ ಕೈಯಿಂದ ಕಪ್ಪಾಳ ಮೇಲೆ ಹೊಡೆದು ಕಾಲಿನಿಂದ ಹೊಟ್ಟೆಯ ಮೇಲೆ ಒದ್ದು ಗುಪ್ತಗಾಯ ಮಾಡಿರುತ್ತರೆ  ಎಲ್ಲರು ಕುಡಿ ನನಗೆ ಎಳದಾಡಿ ಕಟ್ಟಿಗೆಯಿಂದ ಹೊಡೆದು ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಮಟಕಾ ಜೂಜಾಟ ನಿರತವರ ಬಂಧನ :
ಫರತಾಬಾದ ಠಾಣೆ : ದಿನಾಂಕ: 28-10-2013 ರಂದು ಮದ್ಯಾಹ್ನ 3-30 ಗಂಟೆಗೆ ಶ್ರೀ ಶರಣಪ್ಪಾ ಯು. ಪಿ.ಐ ಡಿಸಿಐಬಿ ಘಟಕ ಗುಲಬರ್ಗಾ ರವರು ಠಾಣೆಗೆ ಬಂದು ಹಾಜರಾಗಿ ವರದಿ ಮತ್ತು ಜಪ್ತಿ ಪಂಚನಾಮೆ ನೀಡಿದ್ದರ ಸಾರಾಂಶವೆನೆಂದರೆ, ದಿನಾಂಕ:28-10-2013 ರಂದು ಫರಹತಬಾದ ಪೊಲೀಸ್ ಠಾಣೆಯ ವ್ಯಾಪ್ತಿಯ ಪೈಕಿ ತಾಡ ತೆಗನೂರ ಗ್ರಾಮದ ಮರಗೇಮ್ಮ ಗುಡಿಯ ಹತ್ತಿರ ಎರಡು ಜನರು ದೈವ ಲೀಲೆಯ ಮಟಕಾ ಜೂಜಾಟ ನಡೆಯಿಸುತ್ತಿರುವ ಬಗ್ಗೆ ಮಾಹಿತಿ ಬಂದ ಮರೆಗೆ ನಮ್ಮ ಸಿಬ್ಬಂದಿವರಾದ 1) ಬಸವರಾಜ ಎ.ಎಸ್.ಐ    2) ದತ್ತಾತ್ರಯ ಎ.ಎಸ್.ಐ 3) ಅಣ್ಣಪ್ಪಾ ಹೆಚ್,ಸಿ 332 4) ಬಸವರಾಜ ಹೆಚ್,ಸಿ 409, 5) ಶಿವಯೋಗಿ ಹೆಚ್,ಸಿ 220 6) ಸುರೇಶ ಹೆಚ್ಚ,ಸಿ 431, 7) ಲಕ್ಕಪ್ಪಾ ಹೆಚ್,ಸಿ 260, 8) ಮಲ್ಲಣ್ಣ ಹೆಚ್,ಸಿ 98 ಹಾಗೂ ನಮ್ಮ ಜೀಪ ಚಾಲಕ ಈರಣ್ಣಾ ಎಪಿಸಿ 49 ಕೂಡಿಕೊಂಡು ನಮ್ಮ ಪೊಲೀಸ್ ಜೀಪ್ ನಂ: ಕೆಎ-32 ಜಿ-476 ಮುಖಾಂತರ ಫರಹತಾಬಾದ ಪೊಲೀಸ್ ಠಾಣೆಗೆ ಬಂದು ಸದರಿ ಮಟಕಾ ಜೂಜಾಟ ನಡೆಯುಸುತ್ತಿದ್ದ ಖಚಿತ ಪಡಿಸಿಕೊಂಡು ಠಾಣೆಗೆ ಇಬ್ಬರು ಪಂಚರನ್ನು  ಬರಮಾಡಿಕೊಂಡು ವಿಷಯ ತಿಳಿಸಿದ ನಂತರ ಪಿ.ಎಸ್.ಐ ಫರಹತಾಬಾದ ಮತ್ತು ಅವರ ಸಿಬ್ಬಂಧಿಯವರಾದ 1) ಪ್ರಕಾಶ ಸಿಪಿಸಿ 1065, 2) ಮಲ್ಲಿಕಾರ್ಜುನ ಸಿಪಿಸಿ 463, 3) ವಿಜಯಕುಮಾರ ಸಿಪಿಸಿ 908 4) ಕಿಶೋರ ಸಿಪಿಸಿ 1010 ಎಲ್ಲರೂ ಕೂಡಿಕೊಂಡು ಫರಹತಾಬಾದ ಪೊಲೀಸ್ ಠಾಣೆಯ ಜೀಪಿನಲ್ಲಿ ಹಾಗೂ ನಮ್ಮ ಜೀಪಿನ ಮೂಖಾಂತರ ತಾಡ ತೆಗನೂರ ಗ್ರಾಮದ ಹೋರ ವಲಯದಲ್ಲಿರುವ ಮರೆಗೆಮ್ಮ ಗುಡಿಯ ದೂರದಲ್ಲಿ ಗಿಡಗಂಟೆಗಳ ಪಕ್ಕದಲ್ಲಿ ನಿಂತ್ತು ನೋಡಲು ಒಬ್ಬ ಮನುಷ್ಯನು ಗುಡಿಯ ಮುಂದೆ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ ಕರೆದು 1 ರೂಪಾಯಿಗೆ 80 ರೂಪಾಯಿ ಅಂತಾ ಕೊಡುತ್ತೇವೆ ಅಂತಾ ಮಟಕಾ ಜೂಜಾಟ ಆಡುವಂತೆ ಕರೆಯುತ್ತಿದ್ದನು. ಇನ್ನೊಬ್ಬನು ಅವನ ಹತ್ತಿರ ಕುಳಿತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟದ ಚೀಟಿ ಬರೆದು ಕೊಡುವುದನ್ನು ನೋಡಿ ಪಂಚರಿಗೆ ತೋರಿಸಿ ನಂತರ ಪೊಲೀಸರು ಆ ಎರೆಉ ಜನರಿಗೆ ಮುತ್ತಿಗೆ ಹಾಕಿ ಹಿಡಿದು ವಿಚಾರಿಸಲು ಅವರಲ್ಲಿ ಒಬ್ಬನು ತನ್ನ ಹೆಸರು 1) ಮಹಾಂತಪ್ಪಾ ತಂದೆ ಚಂದ್ರಶ್ಯಾ ಹರಕಂಚಿ ಸಾ: ತಾಡ ತೆಗನೂರ ಅಂತಾ ತಿಳಿಸಿದ ಸದರಿಯವನು ದಾರಿಯಿಂದ ಹೋಗಿ ಬರುವ ಜನರಿಗೆ ಮಟಕಾ ಜೂಜಾಟ ಆಡಲು ಆಹ್ವಾನಿಸುತ್ತಿದ. 2) ಈಶ್ವರರಾಜ ತಂದೆ ಸೈಬಣ್ಣಾ ಕಡಣಿ ಸಾ: ತಾಡತೆಗನೂರ ಅಂತಾ ತಿಳಿಸಿದ ಸದರಿಯವನು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟದ ಚೀಟಿ ಬರೆದು ಕೊಡುತ್ತಿದ್ದ. ಸದರಿಯವರನ್ನು ತಮ್ಮ ಲಾಭಕ್ಕಾಗಿ ಮಟಕಾ ಜೂಜಾಟ ನಡೆಸುತ್ತಿರುವವನ್ನು ಮಟಕಾ ಬುಕ್ಕಿ ನಡೆಸುತ್ತಿದ್ದ ರಾಜಶೇಖರ ಪಾಟೀಲ ಕಮನೂರ ಸಾ:ಗಣೇಶ ನಗರ ಗುಲಬರ್ಗಾ ರವರಿಗೆ ಕೊಡುತ್ತಿದ್ದ ಬಗ್ಗೆ ತಿಳಿಸಿದರು. ಪಿ.ಐ ಸಾಹೇಬರು ಸದರಿ ಇಬ್ಬರಿಗು  ದಸ್ತಗಿರಿ ಮಾಡುವ ಬಗ್ಗೆ ತಿಳಿಸಿ ಅವರ ಅಂಗ ಜಡತ ಮಾಡಲು ಮಹಾಂತಪ್ಪ ಈತನ ಹತ್ತಿರ 2000=00 ರೂಪಾಯಿ ಹಾಗೂ ಎರಡು ಮೊಬೈಲ್‌ಗಳು ಒಂದು ಕಾರ್ಬನ್ ಕಂಪನಿಯದ್ದು , ಮತ್ತೊಂದು ನೊಕಿಯ ಕಂಪನಿಯದಾಗಿರುತ್ತದೆ. ಸದರ ಹಣ ಮಟಕಾ ಜೂಜಾಟಕ್ಕೆ ಸಂಬಂಧಿಸಿದ್ದು ಅಂತಾ ತಿಳಿಸಿ ಎರಡು ಮೊಬೈಯಲ್‌ಗಳು ಮಟಕಾ ಜೂಜಾಟ ನಡೆಸಲು ಉಪಯೋಗಿಸುತ್ತಿದ್ದ ಬಗ್ಗೆ ತಿಳಿಸಿದನು. ಈಶ್ವರರಾಜ ನ ಅಂಗ ಜಡತಿ ಮಾಡಲು ಅವರ ಹತ್ತಿರ 20,000=00 ರೂಪಾಯಿಗಳು ಮತ್ತು ಎರಡು ಮೊಬೈಯಲ್ಗಳು ಅದರಲ್ಲಿ ಒಂದು ಐಡಿಯಾ ಕಂಪನಿಯದ್ದು, ಮತ್ತೊಂದು ಸ್ಪೈಸ್ ಕಂಪನಿಯದಾಗಿರುತ್ತವೆ. ಮತ್ತು ಮಟಕಾ ನಂಬರ ಬರೆದ ಒಂದು ಚೀಟಿ, ಒಂದು ಬಾಲ ಪೆನ್ ಸಿಕ್ಕವು. ಸದರಿಯವುಗಳು ಮಟಕಾ ಜೂಜಾಟಕ್ಕೆ ಬಳಸಿದವುಗಳಾಗಿರುತ್ತವೆ ಅಂತಾ ಹೇಳಿದನು. ಸದರ ನಾಲ್ಕು ಮೊಬೈಯಲ್ ಗಳ ಒಟ್ಟು ಅಂದಾಜು ಕಿಮ್ಮತ್ತು 5,000=00 ರೂ. ಆಗಬಹುದು. ಸದರ ನಗದು ಹಣ 22,000=00 ರೂ, 4 ಮೊಬೈಯಲ್, ಮಟಕಾ ಚೀಟಿ, ಒಂದು ಬಾಲ ಪೆನ್ನ ಗಳು ಆರೋಪಿತರಿಂದ ಜಪ್ತಿ ಮಾಡಿಕೊಂಡಿದ್ದು ಆರೋಪಿತರು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ಈ ಕೃತ್ಯ ಮಾಡಿರುತ್ತಾರೆ ಅಂತಾ ವರದಿಯನ್ನು ಸಲ್ಲಿಸಿದ್ದುರ ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಫಜಲಪೂರ ಠಾಣೆ : ದಿನಾಂಕ 28-10-2013 ರಂದು 2:00 ಪಿ.ಎಮ್ ಕರಜಗಿ ಗ್ರಾಮದ ಐ,ಬಿ ಮುಂದೆ ರೊಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿದ್ದ  ಸಿಬ್ಬಂದಿಯವರೊಂದಿಗೆ ಮತ್ತು ಪಂಚರೊಂದಿಗೆ ಠಾಣೆಯ ಕೀಪಿನಲ್ಲಿ 03:00 ಪಿ ಎಮ್ ಕ್ಕೆ ಸ್ಥಳಕ್ಕೆ ಹೊಗಿ ಸ್ವಲ್ಪ ದೂರು ಮರೆಯಾಗಿ ನಿಂತುಕೊಂಡು ನೋಡಲಾಗಿ. ಕರಜಗಿ ಗ್ರಾಮದ ಐ..ಬಿ ಮುಂದುಗಡೆ  ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಯನ್ನು ಬರೆದು ಕೋಳ್ಳುವದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ 1) ಸಿದ್ದಪ್ಪ ತಂದೆ ದೇವರು ಹೋರ್ತಿ 2) ಮಂಜುನಾಥ ತಂದೆ ವಿಠೋಬಾ ಹೋರ್ತಿ ಸಾ|| ಇಬ್ಬರು ಕರಜಗಿ ಇವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ಠಾಣೆಗೆ ಬಂದು ಅಫಜಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 
ಅಫಜಲಪೂರ ಠಾಣೆ : ದಿನಾಂಕ 28-10-2013 ರಂದು 5:30 ಪಿ.ಎಮ್ ಕ್ಕೆ ಮಣ್ಣೂರ  ಗ್ರಾಮದ ಬಸ್ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿದ್ದ ಸಿಬ್ಬಂದಿ ಇಬ್ಬರು ಪಂಚರ ಸಮಕ್ಷಮ ಠಾಣೆಯ ಜೀಪಿನಲ್ಲಿ ಮಣೂರ ಗ್ರಾಮಕ್ಕೆ ಹೊಗಿ 7:00 ಪಿ ಎಮ್ ಕ್ಕೆ ಸ್ಥಳಕ್ಕೆ ಹೊಗಿ ಸ್ವಲ್ಪ ದೂರು ಮರೆಯಾಗಿ ನಿಂತುಕೊಂಡು ನೋಡಲಾಗಿ. ಬಸ್ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಯನ್ನು ಬರೆದು ಕೋಳ್ಳುವದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ನಾಗು @ ನಾಗಪ್ಪ ತಂದೆ ಶಾಂತಪ್ಪ ಪಾಟೀಲ ಸಾ|| ಮಣ್ಣೂರ ಇತನನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಠಾಣೆಗೆ ಬಂದು ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ಮೌಲಾಲಿ ತಂದೆ ಲಾಲಸಾಬ ಕಡಬೂಡ ಸಾ ಮಾಡಿಯಾಳ ತಾ : ಆಳಂದ ರವರು   ದಿನಾಂಕ 28-10-2013 ರಂದು ತಾಜ ಮುಸ್ಲೀಮ ಸಂಘದಲ್ಲಿ ತಮ್ಮ ಸಂಬಂಧೀಕರ ಮದುವೆ ಕಾರ್ಯಕ್ರಮಕ್ಕೆ ತನ್ನ ಹೀರೋ ಹೊಂಡಾ ಸಿಡಿ 100 ನಂ ಕೆಎ 25 ಕೆ 3696 ನೇದ್ದನ್ನು ತೆಗೆದುಕೊಂಡು ಬಂದಿದ್ದು ಕಾರ್ಯಕ್ರಮ ಮುಗಿಸಿಕೊಂಡು  ಮಾಡಿಯಾಳ ಗ್ರಾಮಕ್ಕೆ ವಾಪಾಸ ಹೋಗುವಾಗ ಪಟ್ಟಣ ಕ್ರಾಸ ಹತ್ತಿರ 11-30 ಗಂಟೆಯ ಸುಮಾರಿಗೆ ಎದುರಿನಿಂದ ಯಾವುದೋ ವಾಹನ ಚಾಲಕ ತನ್ನ ವಾಹನವನ್ನು ಅತೀ ವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ನನ್ನ ಮೋಠಾರ ಸೈಕಲ್ಲಗೆ ಅಪಘಾತಪಡಿಸಿದ್ದರಿಂದ ನನಗೆ ಭಾರಿಗಾಯಗಾಳಾಗಿದ್ದು ತನ್ನ ವಾಹನ ಸಮೇತ ಓಡಿಹೋಗಿರುತ್ತನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಮೈನೊದ್ದಿನ ತಂದೆ ಮಹ್ಮದ ಸಾಬ ನಧಾಫ ರವರು ದಿನಾಂಕ 28-10-2013 ರಂದು 3-30ಪಿ,ಎಮ್ ಕ್ಕೆ ನಾನು ಮತ್ತು ಖಾಸಿಮನಬೀ ಮೂರು ಜನರು ಕೂಡಿಕೊಂಡು ಎಮ್.ಎಸ್.ಕೆ.ಮೀಲ ಕಡೆಯಿಂದ ಕೇಂದ್ರ ಬಸ್ ನಿಲ್ದಾಣದ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕಣ್ಣಿ ಮಾರ್ಕೆಟ ಹತ್ತಿರ ರೋಡಿನ ಮೇಲೆ ಮೋಟಾರ ಸೈಕಲ ನಂಬರ ಕೆಎ-32 ವಿ-3830 ನೇದ್ದರ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಹಿಂದಿನಿಂದ ಡಿಕ್ಕಿ ಪಡಿಸಿ ಭಾರಿಗಾಯಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಹೊರಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ :
ಬ್ರಹ್ಮಪೂರ ಠಾಣೆ : ದಿನಾಂಕ: 28-10-2013 ರಂದು 1700 ಗಂಟೆಗೆ ಅಶೋಕ ಸಿಪಿಸಿ 494 ಬ್ರಹ್ಮಪೂರ ಪೊಲೀಸ್ ಠಾಣೆ ಗುಲಬರ್ಗಾ ರವರು  ಠಾಣೆಗೆ ಹಾಜರಾಗಿ ವರದಿ ನೀಡುವುದೆನಂದರೆ. ದಿನಾಂಕ: 26-10-2013 ರಂದು ನಾನು ಜಿಲ್ಲಾ ಸರಕಾರಿ ಆಸ್ಪತ್ರೆಯ ಓ.ಪಿ ಕರ್ತವ್ಯದ ಮೇಲೆ ಇದ್ದಾಗ ಅಪರಿಚಿತ ವಯಸ್ಸಾಗಿದ್ದ ಹೆಣ್ಣು ಮಗಳನ್ನು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ 108 ಆರೋಗ್ಯ ಕವಚದ ವಾಹನದವರು ಸೇರಿಕೆ ಮಾಡಿದ್ದುಸದರಿ ಹೆಣ್ಣು ಮಗಳು ಉಪಚಾರ ಫಲಕಾರಿಯಾಗದೆ ಇಂದು ದಿನಾಂಕ: 28-10-2013 ರಂದು ಬೆಳಿಗ್ಗೆ  10:30 ಗಂಟೆಯ ಸುಮಾರಿಗೆ ಮರಣ ಹೊಂದಿದ್ದು ಇರುತ್ತದೆ. ಸದರಿ ಹೆಣ್ಣು ಮಗಳ ವಾರಸುದಾರರು ಯಾರು ಎಂಬುದು ಗೊತ್ತಾಗಿರುವದಿಲ್ಲ. ಅಂದಾಜು ವಯಸ್ಸು 60-65ರ ವರೆಗೆ ಇರುತ್ತದೆ. ಯಾವುದೋ ಒಂದು ಕಾಯಿಲೆಯಿಂದ ನರಳಿ ಮರಣ ಹೊಂದಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಶ್ರಿಕಾಂತ ತಂದೆ ಶಿವಶರಣಪ್ಪಾ ಖಾನಾಪುರ ಸಾಃ ಗುಬ್ಬಿಕಾಲೊನಿ ಗುಲಬರ್ಗಾ ಇವರು ಮತ್ತು  ಹೆಂಡತಿ ಮಕ್ಕಳ್ಳೊಂದಿಗೆ ಹಬ್ಬವಿದ್ದ ಪ್ರಯುಕ್ತ ಗಾಜಿಪುರದ ಮಾರ್ಕೇಟಗೆ ಹೊಗಿ ನನ್ನ ಹೆಂಡತಿಯ ಅಕ್ಕನ ಹತ್ತಿರ ಬಿಟ್ಟು ಮರಳಿ ನಾನು 03:00 ಪಿ,ಎಂ,ಕ್ಕೆ ಎಲ್,ಜಿ ಬಾರಗೆ ಹೊಗಿ ಶರಾಯಿ ಕುಡಿದು ಮನೆಗೆ 04:00 ಪಿ,ಎಂ, ಕ್ಕೆ ಬಂದು ನೊಡಲು ಮನೆಯ ಬಾಗಿಲದ ಕಿಲಿಕಪ್ಪೆ ಇರಲಿಲ್ಲಾ, ನಂತರ ಮನೆಯೊಳಗೆ ಹೊಗಿ ಅಲಮಾರಿಯನ್ನು ನೊಡಲು ಅಲಮಾರಿಯಲ್ಲಿಟ್ಟ 1) 59 ಗ್ರಾಂ ಬಂಗಾರದ ಆಭರಣ ಮತ್ತು 16 ತೊಲೆ 05 ಗ್ರಾಂ ಬೆಳ್ಳಿಯ ಆಭರಣಗಳು ಇರಲಿಲ್ಲಾ, ಹೀಗೆ ಒಟ್ಟು ಅಃಕಿಃ 1,40,000/ರೊ ಬೆಲೆ ಬಾಳುವ ಸಾಮಾನುಗಳು ಇರಲಿಲ್ಲಾ, ಎಲ್ಲಾ ಸಾಮಾನುಗಳು ಚಿಲ್ಲಾಪಿಲ್ಲಿಯಾಗಿ ಬಿದ್ದಿದ್ದು ನಂತರ  ನನ್ನ ಹೆಂಡತಿಗೆ ಪೋನ ಮಾಡಿ ಮನೆಗೆ ಬರಲು ತಿಳಿಸಿದೆನು, ಮನೆ ಕಳ್ಳತನವಾದ ದುಖಃ ದಲ್ಲಿ  ಗಾಬರಿಗೊಂಡು ಆ ದಿವಸ ಪಿರ್ಯಾಧಿ ಕೊಡದೆ ಇಂದು ತಡವಾಗಿ ಬಂದು ಪಿರ್ಯಾದಿಯನ್ನು ಕೊಟ್ಟಿರುತ್ತೆನೆ, ಕಾರಣ ದಿನಾಂಕಃ 25-10-2013 02:30 ಪಿ.ಎಂ. ದಿಂದ 04:00 ಪಿ.ಎಂ. ರ ಅವಧಿಯಲ್ಲಿ ಯಾರೋ ಕಳ್ಳರು ಮನೆಯ ಕೀಲಿ ಮುರಿದು ಮನೆಯೊಳಗೆ ಪ್ರವೇಶ ಮಾಡಿ ಅಲಮಾರಿಯಲ್ಲಿಟ್ಟ ಬಂಗಾರ ಮತ್ತು ಬೆಳ್ಳಿಯ ಆಬರಣಗಳು ಹಾಗು ಸಾಮಾನುಗಳು ಅಃಕಿಃ 1,40,000/- ರೂ. ಬೆಲೆ ಬಾಳುವುದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಎಮ್.ಬಿ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ವಿಶ್ವವಿದ್ಯಾಲಯ ಠಾಣೆ : ದಿನಾಂಕ: 28-10-2013 ರಂದು 12-30 ಪಿಎಮಕ್ಕೆ ಸುಮಾರಿಗೆ ಠಾಣೆಯ ಹದ್ದಿಯ ಪೈಕಿ ಬಾಪೂ ನಾಯಕ ತಾಂಡಾದ ಸಂತೋಷ ತಂದೆ ಶಂಕರ ಜಾಧವ ಇವರ ಮನೆಯ ಎದುರು ಅನಧೀಕೃತವಾಗಿ ಯಾವುದೆ ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಮಧ್ಯ ಮಾರಾಟ ಮಾಡುತ್ತಿದ್ದಾರೆಂದು ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರನ್ನು ಮತ್ತು ಠಾಣೆಯಲ್ಲಿದ್ದ ಶ್ರೀ ಪ್ರದೀಪ ಭಿಸೆ ಪಿ.ಎಸ.ಐ(ಅವಿ), ಸಿಬ್ಬಂದಿಯವರಾದ ರವೀಂದ್ರ ಸಿಪಿಸಿ-227, ಮಶಾಕ ಪಿಸಿ-556, ರವರಿಗೆ ಕರೆದುಕೊಂಡು ಠಾಣೆಯ ಸರಕಾರಿ ಜೀಪ ನಂ. ಕೆಎ-32-ಎಂ-1594 ನೇದ್ದರಲ್ಲಿ ಕರೆದುಕೊಂಡು 1-00 ಪಿ.ಎಮಕ್ಕೆ ಠಾಣೆಯಿಂದ ಶಹಬಾದ ರೋಡ ಮುಖಾಂತರ ಹೊರಟು ಬಾಪೂ ನಾಯಕ ತಾಂಡಾದ ಸಂತೋಷ ಜಾಧವ ಇವರ ಮನೆ ಇನ್ನು ಮುಂದೆ ಇರುವಂತೆ ಜೀಪ ನಿಲ್ಲಿಸಿ ಇಳಿದು ಬಾಪೂ ನಾಯಕ ತಾಂಡಾದ ಒಂದು ಮನೆಯ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬನು ಮನೆಯ ಮುಂದೆ ನಿಂತು ಗಿರಾಕಿಗಳಿಗೆ ಮಧ್ಯದ ಬಾಟಲಗಿಳನ್ನು ಮಾರಾಟ ಮಾಡುತ್ತಿದ್ದು ಅವರಿಂದ ಹಣವನ್ನು ಪಡೆದುಕೊಳ್ಳುತ್ತಿದ್ದುದ್ದನ್ನು ನೋಡಿ ಖಚಿತ ಪಡಿಸಿಕೊಂಡು ನಾನು ಮತ್ತು ಪಿ.ಎಸ.ಐ(ಅವಿ) ಹಾಗೂ ಸಿಬ್ಬಂದಿಯವರ ಸಹಾಯದಿಂದ ಮುತ್ತಿಗೆ ಹಾಕಿ ಮನೆಯ ಮುಂದೆ ನಿಂತು ಮಧ್ಯದ ಬಾಟಲಿಗಳನ್ನು ಕೊಡುತ್ತಿದ್ದವನಿಗೆ ಹಿಡಿದು ವಿಚಾರಿಸಲು ಅವನು ತನ್ನ ಹೆಸರು ಸಂತೋಷ ತಂದೆ ಶಂಕರ ಜಾಧವ  ಸಾ|| ಬಾಪೂ ನಾಯಕ ತಾಂಡಾ ನಂದೂರ(ಬಿ) ತಾ|ಜಿ|| ಗುಲಬರ್ಗಾ ಅಂತಾ ಹೇಳಿದನು. ಸದರಿಯವನಿಗೆ ಮಧ್ಯದ ಮಾರಾಟ ಮಾರುವ ಬಗ್ಗೆ ಪರವಾನಿಗೆ ಕುರಿತು ವಿಚಾರಿಸಲು ಯಾವುದೆ ಪರವಾನಿಗೆ ಇರುವದಿಲ್ಲ ಅಂತಾ ತಿಳಿಸಿದನು. ಸದರಿ ಮನೆಯ ಮುಂದೆ ಇಟ್ಟಿದ್ದ ಮಧ್ಯದ ಬಾಟಲಿಗಳನ್ನು ಚೆಕ್ ಮಾಡಲಾಗಿ 1) ಕಿಂಗ ಫಿಶರ ಬಿಯರ 650 ಎಂ.ಎಲನ 3 ಬಾಕ್ಸಗಳು (36 ಬಾಟಲ) ಅ||ಕಿ||3240/-ರೂ, 2) ನಾಕ ಔಟ ಬೀಯರ 330 ಎಂ.ಎಲನ 4 ಟಿನ್ ಅ||ಕಿ|| 200/-ರೂ, 3) ರಾಯಲ್ ಸ್ಟ್ಯಾಗ 180 ಎಂ.ಎಲನ 6 ಬಾಟಲಿಗಳು ಅ||ಕಿ| 900/-ರೂ, 4) ಆಫೀಸರ ಚಾಯ್ಸ 180 ಎಂ.ಎಲನ 6 ಬಾಟಲಿಗಳು ಅ||ಕಿ| 400/-ರೂ ಮತ್ತು ನಗದು ಹಣ 500/-ರೂ ಒಟ್ಟು ಮುದ್ದೆ ಮಾಲು ಮತ್ತು ನಗದು ಹಣ ಸೇರಿ ಒಟ್ಟು 5240/-ರೂಪಾಯಿ ಕಿಮ್ಮತ್ತಿನ ಮುದ್ದೆ ಮಾಲನ್ನು ಜಪ್ತು ಮಾಡಿಕೊಂಡು. ಸದರಿ ಸಂತೋಷ ತಂದೆ ಶಂಕರ ಜಾಧವ ಇತನಿಗೆ ದಸ್ತಗಿರಿ ಮಾಡಿಕೊಂಡು ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ ಬಂದು ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.