POLICE BHAVAN KALABURAGI

POLICE BHAVAN KALABURAGI

12 June 2015

Kalaburagi District Reported Crimes

ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 11-06-2015 ರಂದು ಅಫಜಲಪೂರದಲ್ಲಿ ಶ್ರೀಮತಿ ಲಕ್ಷ್ಮೀಬಾಯಿ ಗಂಡ ಚನ್ನಪ್ಪಾ ಸಂಕೊಂಡ ಸಾ ಬಳೂಂಡಗಿ ತಾ : ಜೇವರ್ಗಿ ರವರ ಸೊಸೆ ಮಲ್ಲಮ್ಮ ಇವಳ ದೊಡ್ಡಮ್ಮ ಭೀಮಬಾಯಿ ಇವರು ತೀರಿಕೊಂಡಿದ್ದರಿಂದ ನಾನು ಮತ್ತು ನನ್ನ ಸೊಸೆ ಮಲ್ಲಮ್ಮ ಹಾಗು ನನ್ನ ಮಗ ಶರಣಬಸು ರವರು ಕೂಡಿ ಮದ್ಯಾಹ್ನ ಸಮಯದಲ್ಲಿ ಅಫಜಲಪೂರಕ್ಕೆ ಬಂದಿರುತ್ತೇವೆ. ನಂತರ ನನ್ನ ಮಗ ಕೇಸುರಾಯ ಇವನು ಸಹ ಒಂದು ಮೋಟರ ಸೈಕಲ ತೆಗೆದುಕೊಂಡು ಅಫಜಲಪೂರಕ್ಕೆ ಬಂದಿದ್ದನು. ಸದರಿ ಭೀಮಬಾಯಿ ರವರ ಅಂತಿಮ ಸಂಸ್ಕಾರ ಮುಗಿದ ನಂತರ ನಾನು ಮತ್ತು ನನ್ನ ಸೊಸೆ ಮಲ್ಲಮ್ಮ ಹಾಗು ನನ್ನ ಮಗ ಕೇಸುರಾಯ ರವರು ಕೂಡಿ ಅವನು ತಂದ ಮೋಟರ ಸೈಕಲ್ ನಂ ಕೆ.ಎ-32/ಇ.ಹೆಚ್-3669 ನೇದ್ದರ ಮೇಲೆ ನಮ್ಮೂರಿಗೆ ಹೊರಟಿರುತ್ತೇವೆ. ಮೋಟರ ಸೈಕಲನ್ನು ಕೇಸುರಾಯ ಇವನು ನಡೆಸುತ್ತಿದ್ದು, ನಡುವೆ ನಾನು ಮತ್ತು ಹಿಂದುಗಡೆ ನನ್ನ ಸೊಸೆ ಮಲ್ಲಮ್ಮ ಕುಳತಿದ್ದಳು. ನನ್ನ ಮಗ ಕೇಸುರಾಯ ಇವನು ಹಿಂಚಗೇರಿ ಸಮೀಪ ಇದ್ದಾಗ ತನ್ನ ಮೋಟರ ಸೈಕಲನ್ನು ಅತೀವೇಗವಾಗಿ ನಡೆಸುತ್ತಿದ್ದನು, ಆಗ ನಾನು ಮತ್ತು ಮಲ್ಲಮ್ಮ ರವರು ನಿಧಾನವಾಗಿ ಓಡಿಸು ಅಂತಾ ಹೇಳುತ್ತಿದ್ದೇವು, ಅದೇ ಸಮಯಕ್ಕೆ ನಮ್ಮ ಎದುರುಗಡೆಯಿಂದ ಒಂದು ಡಬಲ್ ಟ್ರಾಯಲಿ ಟ್ರ್ಯಾಕ್ಟರ್ ಶೂಗರ ಫ್ಯಾಕ್ಟ್ರಿ ಗೊಬ್ಬರ ತುಂಬಿಕೊಂಡು ಬರುತ್ತಿದ್ದು, ಅದರ ಚಾಲಕನು ಅತೀವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸುತ್ತಾ ಬರುತ್ತಿದ್ದನು, ಆಗ ನಾನು ಕೇಸುರಾಯನಿಗೆ ಎದುರುಗೆ ಟ್ರ್ಯಾಕ್ಟರ್ ಚಾಲಕನು ಅಡ್ಡಾದಿಡ್ಡಿಯಾಗಿ ಬರುತ್ತಿದ್ದಾನೆ ನೀನು ನಿಧಾನವಾಗಿ ಚಲಾಯಿಸು ಅಂತಾ ಅಂದಾಗ ಕೇಸುರಾಯ ಇವನು ಅದಕ್ಕೇನಾಗಲ್ಲಾ ಅಂತಾ ಹೇಳಿ ಪುನಃ ತನ್ನ ಮೋಟರ ಸೈಕಲನ್ನು ನಿಸ್ಕಾಳಜಿತನದಿಂದ ಚಲಾಯಿಸುತ್ತಿದ್ದನು, ಹಿಂಚಗೇರಾ ಗ್ರಾಮ ಹತ್ತಿರ ನನ್ನ ಮಗ ಒಮ್ಮೇಲೆ ಮೋಟರ ಸೈಕಲನ್ನು ಕಟ ಮಾಡಿ ರೊಡಿನ ಕೆಳಗೆ ಜೋರಾಗಿ ತೆಗೆದುಕೊಂಡಿದ್ದರಿಂದ ನನ್ನ ಹಿಂದೆ ಕುಳಿತ ನನ್ನ ಸೊಸೆ ಮಲ್ಲಮ್ಮ ಇವಳು ಒಮ್ಮೇಲೆ ಮೋಟರ ಸೈಕಲ ಮೇಲಿಂದ ರಸ್ತೆಯ ಮೇಲೆ ಅಂಗಾತವಾಗಿ ಬಿದ್ದಾಗ ಎದುರುಗಡೆಯಿಂದ ಬರುತ್ತಿದ್ದ ಟ್ರ್ಯಾಕ್ಟರ್ ಚಾಲಕನು ಅತೀವೇಗವಾಗಿ ಬಂದು ನನ್ನ ಸೊಸೆಯ ಮೈ ಮೇಲೆ ಹಾಯಿಸಿದನು. ಆಗ ನನ್ನ ಸೊಸೆ ಮಲ್ಲಮ್ಮ ಇವಳಿಗೆ ಗುಪ್ತಾಂಗದ ಹತ್ತಿರ ಭಾರಿ ರಕ್ತಗಾಯವಾಗಿ ಸ್ಥಳದಲ್ಲೆ ಮೃತ ಪಟ್ಟಿರುತ್ತಾಳೆ. ಸದರಿ ಟ್ರ್ಯಾಕ್ಟರ್ ಚಾಲಕನು ಮತ್ತು ನನ್ನ ಮಗ ಕೇಸುರಾಯನು ತಮ್ಮ ವಾಹನಗಳನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋಗಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ  ಪಂಡಿತ ತಂದೆ ಲಕ್ಷ್ಮಣ ಮುಗಳಿ ಸಾ: ಬಡದಾಳ ಇವರು 10-12 ವರ್ಷಗಳ ಹಿಂದೆ ನಮ್ಮೂರಲ್ಲಿ ಗೌಂಟಾಣಿ ಖುಲ್ಲಾ ಜಾಗ ಹಿಡಿದಿರುತ್ತೆನೆ. ಸದರಿ ನನ್ನ ಜಾಗದ ಪಕ್ಕದಲ್ಲಿ ನಮ್ಮ ಸಮಜಾದ ಬಸಪ್ಪ ತಂದೆ ಕಲ್ಲಪ್ಪ ಡೆಬ್ಬಿ ಈತನ ಜಾಗ ಇರುತ್ತದೆ. ನಾನು ಈಗ 5-6 ವರ್ಷಗಳಿಂದ ಹೊಟ್ಟೆ ಉಪ ಜೀವನಕ್ಕಾಗಿ ಹೆಂಡತಿ ಮಕ್ಕಳೊಂದಿಗೆ ಪೂನಾಕ್ಕೆ ಹೋಗಿ ಅಲ್ಲೆ ಕೂಲಿ ಕೆಲಸ ಮಾಡುತ್ತಿದ್ದೆನು. ಈಗ ನಾನು ನನ್ನ ಹೆಂಡತಿ ಮಕ್ಕಳೊಂದಿಗೆ ನಮ್ಮೂರಿಗೆ ಬಂದಿರುತ್ತೆನೆ. ನಾನು ಈ ಹಿಂದೆ ಹಿಡಿದ ನನ್ನ ಗೌಂಟಾಣಿ ಜಾಗದಲ್ಲಿ ನಮ್ಮ ಜಾಗದ ಪಕ್ಕದಲ್ಲಿದ್ದ ಬಸಪ್ಪ ಡೆಬ್ಬಿ ಈತನು ಮನೆ ಕಟ್ಟಿರುತ್ತಾನೆ. ಇದರಿಂದ ನಾನು ಸದರಿ ಬಸಪ್ಪ ಡೆಬ್ಬಿ ಈತನಿಗೆ ನಮ್ಮ ಜಾಗದಲ್ಲಿ ಮನೆ ಯಾಕೆ ಕಟ್ಟಿದಿ ಎಂದು ಕೇಳಿದಕ್ಕೆ, ಬಸಪ್ಪನು ನನ್ನೊಂದಿಗೆ ಜಗಳ ಮಾಡಿ ನಿನ್ನ ಜಾಗ ಇಲ್ಲ ನನ್ನದು ಇರುತ್ತದೆ ಎಂದು ಜಗಳ ಮಾಡುತ್ತಾ ಬಂದಿರುತ್ತಾನೆ. ಸದರಿ ಬಸಪ್ಪ ಡೆಬ್ಬಿ ಈತನ ಮೇಲ್ ಕಟ್ಟಿ ನಮ್ಮೂರಿನ ಹೂವಣ್ಣ ಡೆಬ್ಬಿ ಮತ್ತು ಬೀರಪ್ಪ ಡೆಬ್ಬಿ, ಭೂತಾಳಿ ಹದರಿ ಇವರು ಮಗನೆ ಬಸಪ್ಪನಿಗೆ ನೀನು ಜಾಗ ಕೇಳಿದರೆ ನೀನಗೆ ಜಿವ ಸಹಿತ ಬಿಡುವುದಿಲ್ಲ ಅಂತಾ ನನಗೆ ಜೀವ ಬೇದರಿಕೆ ಹಾಕುವುದು, ನನ್ನೊಂದಿಗೆ ಜಗಳ ಮಾಡುವುದು ಮಾಡುತ್ತಿರುತ್ತಾರೆ. ದಿನಾಂಕ 11-06-2015 ರಂದು ಬೆಳಿಗ್ಗೆ 10:00 ಗಂಟೆ ಸುಮಾರಿಗೆ ನಮ್ಮೂರಿನ ಹಿರಿಯರಾದ ಮಲ್ಲೇಶಿ ಬಿದನೂರ ಇವರು ನಮ್ಮೂರಿನ ಮೆಂದಿಸಾಬ ದರ್ಗಾದ ಮಾಲಗಂಬದ ಹತ್ತಿರ ಸದರಿ ಜಾಗದ ವಿಷಯವಾಗಿ ನನಗೆ ಮತ್ತು ಬಸಪ್ಪ ಡೆಬ್ಬಿ ಈತನಿಗೆ ಕರೆಸಿ ನ್ಯಾಯ ಪಂಚಾಯತಿ ಮಾಡುತ್ತಿದ್ದರು, ನ್ಯಾಯ ಪಂಚಾಯತಿ ಮಾಡುತ್ತಿದ್ದಾಗ, ಹೂವಣ್ಣ ತಂದೆ ಜಟ್ಟೆಪ್ಪ ಡೆಬ್ಬಿ ಈತನು ತನ್ನ ಕೈಯಲ್ಲಿ ಸೈಕಲ ಚೈನ ಹಿಡಿದುಕೊಂಡು ಬೀರಪ್ಪ ತಂದೆ ಕರೆಪ್ಪ ಡೆಬ್ಬಿ, ಭೂತಾಳಿ ತಂದೆ ಖಾಜಪ್ಪ ಹದರಿ, ಬಸಪ್ಪ ತಂದೆ ಲಕ್ಕಪ್ಪ ಡೆಬ್ಬಿ ಇವರೊಂದಿಗೆ ನನ್ನ ಹತ್ತಿರ ಬಂದು ನನಗೆ ಏನೊ ಸೂಳೆ ಮಗನೆ ಜಾಗದ ತಂಟೆಗೆ ಬರಬೇಡಾ ಅಂತಾ ನಾನು ನಿನಗೆ ಮೋದಲೆ ಹೇಳಿಲ್ಲಾ ಅಂತಾ ಅಂದನು. ಆಗ ಭೂತಾಳಿ ಹದರಿ ಮತ್ತು ಬಸಪ್ಪ ಡೆಬ್ಬಿ ಇವರು ನನಗೆ ಅಲುಗಾಡದಂತೆ ಹಿಡಿದುಕೊಂಡಾಗ ಹೂವಣ್ಣ ಡೆಬ್ಬಿ ಈತನು ತನ್ನ ಕೈಯಲ್ಲಿದ್ದ ಸೈಕಲ ಚೈನಿನಿಂದ ನನ್ನ ಬೆನ್ನಿನ ಮೇಲೆ ಹಾಗೂ ಕೈಗಳ ಮೇಲೆ ಹೊಡೆಯುತ್ತಿದ್ದನು. ಭಿರಪ್ಪ ಡೆಬ್ಬಿ ಈತನು ಕೈಯಿಂದ ನನ್ನ ಮೈ ಕೈಗೆ ಹೊಡೆದು ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 11-06-2015 ರಂದು ಶ್ರೀಮತಿ ಸೋಮಾಬಾಯಿ ಗಂಡ ರಾಜಶೇಖರ ಕೋಟೆ ಸಾ: ಉಡಚಾಣ ಗ್ರಾಮ ತಾ: ಅಫಜಲಪೂರ ರವರು ತಮ್ಮ ಮನೆಯ ಮುಂದೆ ಜೋಳ ಹಸನು ಮಾಡುತ್ತಿರುದ್ದಾಗ, ಜೋಳದ ಸುಂಕು ನಮ್ಮ ಎದುರುಮನೆಯವನಾದ ರಾಮ ತಂದೆ ಭೀಮಶಾ ಕೋಟೆ ಈತನ ಮೋಟಾರ ಸೈಕಲ ಮೇಲೆ ಹೋಗಿ ಬಿದ್ದಿರುತ್ತದೆ. ಆಗ ರಾಮ ಈತನ ತಾಯಿ ಮರೆವ್ವ ಗಂಡ ಭೀಮಶಾ ಕೋಟೆ ಹಾಗೂ ಅಂದರೆ ನನ್ನ ನಾದನಿಯರಾದ ಜಯಶ್ರೀ ಗಂಡ ಬಸವರಾಜ ಗಂಗನಳ್ಳಿ, ಯಲ್ಲವ್ವ ಗಂಡ ಲಕ್ಷ್ಮಣ ಮ್ಯಾಕೇರಿ ಇವರು ನನ್ನ ಹತ್ತಿರ ಬಂದು ಏನೆ ರಂಡಿ ಬೇಕು ಅಂತಾ ನಮ್ಮ ಗಾಡಿಯ ಮೇಲೆ ಕಸ ಹಾಕುತ್ತಿ ಅಂತಾ ಎಲ್ಲರೂ ಕೂಡಿ ನನಗೆ ಹೊಲಸು ಹೊಲಸು ಬೈಯುವುದು ಹಾಗೂ ಎಲ್ಲರೂ ಕೂಡಿ ಕೈಯಿಂದ ಹೊಡೆಯುವುದು ಮಾಡುತ್ತಿದ್ದರು, ಆಗ ಮನೆಯಲ್ಲಿದ್ದ ನನ್ನ ಗಂಡ ಶಬ್ದ ಕೇಳಿ ಹೊರಗೆ ಬಂದು ನನಗೆ ಹೊಡೆಯುವುದನ್ನು ಬೀಡಸಲು ಬಂದಾಗ, ರಾಮ ತಂದೆ ಭಿಮಶಾ ಕೋಟೆ ಈತನು ಬಂದು ನನ್ನ ಗಂಡನಿಗೆ ಹಿಡಿದುಕೊಂಡು ಕಲ್ಲಿನಿಂದ ನನ್ನ ಗಂಡನ ತಲೆಯ ಮೇಲೆ ಹೊಡೆದನು. ಹಾಗೂ ಜಯಶ್ರೀ, ಯಲ್ಲವ್ವ, ಮರೆವ್ವ ಇವರುಗಳು ನನ್ನ ಗಂಡನ ಎಡಗಾಲು ಹಿಡಿದು ಜಗ್ಗಾಡಿರುತ್ತಾರೆ, ಇದರಿಂದ ನನ್ನ ಗಂಡನ ತಲೆಗೆ ರಕ್ತಗಾಯ ಮತ್ತು ಎಡಗಾಲಿಗೆ ಗುಪ್ತಗಾಯವಾಗಿರುತ್ತದೆ. ರಾಮ ಈತನು ನನ್ನ ಗಂಡನಿಗೆ ಮಗನೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವ ಬೇದರಿಕೆ ಹಾಕಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.